ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ಸರ್ಕಾರ ರಚಿಸಿದೆ.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಮೂಲ್ಯ ಕೊಂಡೆ ಮಾರ್, ಸದಸ್ಯರಾಗಿ ಬಿ ಗೋಪಿನಾಥ ನಾಯಕ್ ಕುವೆಟ್ಟು, ಸತೀಶ್ ಬಂಗೇರ ಕುವೆಟ್ಟು, ಹರಿಪ್ರಸಾದ್ ಇರ್ವತ್ರಾಯ ಓಡಿಲ್ನಾಳ, ಧನಂಜಯ್ ರಾವ್ ಗುರುವಾಯನಕೆರೆ, ಕೆ ರಾಜು ಪಡಂಗಡಿ, ಶ್ರೀಮತಿ ಶಾಂಭವಿ ಪಿ ಬಂಗೇರ ಬೆಳ್ತಂಗಡಿ, ಶ್ರೀಮತಿ ಸವಿತಾ ಸೋಣಂದೂರು, ಹಾಗೂ ಪ್ರಧಾನ ಅರ್ಚಕರಾಗಿ, ಎನ್ ರಾಘವೇಂದ್ರ ಭಟ್ ಕುವೆಟ್ಟು ನೇಮಕವಾಗಿದ್ದಾರೆ. ಆಡಳಿತ ಅಧಿಕಾರಿ ರಾಘವೇಂದ್ರ ಪಾಟೀಲ್ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.
