ಚಾರ್ಮಾಡಿ; ಟಿಪ್ಪರ್ ಬಾಡಿಗೆ ವಿಚಾರ ಹೊಡೆದಾಟ; ಧರ್ಮಸ್ಥಳ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು
ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಟಿಪ್ಪರ್ ಬಾಡಿಗೆ ವಿಚಾರವಾಗಿ ನಡೆದ ಹೊಡೆದಾಟ ಪ್ರಕರಣದಲ್ಲಿ ಇದೀಗ ಧರ್ಮಸ್ಥಳ ಠಾಣೆಯಲ್ಲಿ ತೌಸೀಫ್ ಮತ್ತು ಮುನೀರ್ ಎಂಬವರ ವಿರುದ್ದ ಮತ್ತೊಂದು ಪ್ರಕರಣ ದಾಖಲಾಗಿದೆ.ಟಿಪ್ಪರ್ ಚಾಲಕ ರಹಿಮಾನ್ ನೀಡಿರುವ ದೂರಿನಲ್ಲಿ ಚಾರ್ಮಾಡಿ ಬೀಟಿಗೆಯ ಅಂಗಡಿಯಲ್ಲಿ ನಿಂತಿದ್ದ ವೇಳೆ ತನ್ನ ಮೇಲೆ ಫಯಾಜ್ ಮೇಲೆ ಮುನೀರ್ ಹಾಗೂ ತೌಸೀಫ್ ಕಬ್ಬಿಣದ ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದೇ ಘಟನೆಗೆ ಸಂಬಂಧಿಸಿದಂತೆ ತೌಸೀಫ್ ನೀಡಿದ ದೂರಿನಂತೆ ರಹೀಂ...
ಉಜಿರೆಯಲ್ಲಿ ರೈನಾಥಾನ್; ನೂರಾರು ಯುವಕರು ಭಾಗಿ ಯುವಜನತೆ ಮಾದಕ ಚಟಕ್ಕೆಬಲಿಯಾಗಬಾರದು; ಪ್ರೊ ಪಿ.ಎಲ್. ಧರ್ಮ
ಬೆಳ್ತಂಗಡಿ; ಮಾದಕ ವಸ್ತು ಬಳಸುವ, ಬಳಸಲು ಪ್ರೇರೇಪಿಸುವ,ಸಹಕರಿಸುವ ಕೆಲಸ ಮನುಕುಲಕ್ಕೆ ವಿರುದ್ಧವಾದುದು, ಯುವಜನತೆ ದೇಶದ ಆಸ್ತಿಯಾಗಿದ್ದು ಮಾದಕ ಚಟಕ್ಕೆ ಬಲಿಯಾಗಬಾರದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಎಲ್. ಧರ್ಮ ಹೇಳಿದರುಅವರು ಭಾನುವಾರ ವ್ಯಸನ ಮುಕ್ತ ಭಾರತ ಜಾಗೃತಿಗಾಗಿಉಜಿರೆಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಜರಗಿದ ರೈನಾಥನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮನುಕುಲಕ್ಕೆ ಅಪಾಯ ಉಂಟು ಮಾಡುವ ಯಾವುದೇ ಕೆಲಸಕ್ಕೆ ಸಹಕರಿಸುವುದು ಅಸಂವಿಧಾನಿಕ,ರೈನಾಥನಗ ಸ್ಪರ್ಧೆಯಲ್ಲ ಸಮಾಜಕ್ಕೆ ಸಂದೇಶ ನೀಡುವ ಕಾರ್ಯವಾಗಿದೆ. ಸಮಾಜ ಆರೋಗ್ಯ ಪೂರ್ಣ ವಾಗಿದ್ದಾರೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು. ಮಂಗಳೂರು ಸೈಬರ್ ಪೊಲೀಸ್...
ಪಜೀರಡ್ಕದ ಶ್ರೀ ದೇವಲಿಂಗೇಶ್ವರ ದೇವಸ್ಥಾನದಲ್ಲಿ ತಪೋವನ ನಿರ್ಮಾಣಕ್ಕೆ ಸಸ್ಯಗಳ ಪೂಜೆ; ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ; ಕನ್ಯಾಡಿ ಶ್ರೀಗಳು
ಬೆಳ್ತಂಗಡಿ; ಶುದ್ಧವಾದ ಗಾಳಿ, ಪರಿಸರಕ್ಕೆ ತಪೋವನ ಅತ್ಯಗತ್ಯ.ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ. ಕಾಲಕಾಲಕ್ಕೆ ಆಗಬೇಕಾದ ಕೆಲಸಗಳ ಪುನರುಜ್ಜೀವನಕ್ಕೆ ಊರಿನ ಜನರು ಕೈಜೋಡಿಸಬೇಕು.ಇದು ಲೋಕಕ್ಕೆ ಅನುಕೂಲ ನೀಡುತ್ತದೆ ಎಂದು 1008 ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಶ್ರೀ ಗುರುದೇವ ಟ್ರಸ್ಟ್ ನ ಆದಿ ಪಜೀರಡ್ಕದ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಪೋವನ ನಿರ್ಮಾಣಕ್ಕೆ ಸಸ್ಯಗಳ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.ಜಿಲ್ಲೆಯಲ್ಲಿ ಸುಸಜ್ಜಿತ ತಪೋವನದ ಕೊರತೆ ಇದೆ.ಇಲ್ಲಿ ಋಷಿ,ಮುನಿಗಳಿಗೆ ಬೇಕಾದಂತಹ ಮಾದರಿಯ ತಪೋವನ ನಿರ್ಮಾಣವಾಗಲಿದೆ....
ಹೋರಾಟ ನಿರತ ರೈತರ ಮತ್ತು ರೈತ ಮುಖಂಡರ ಬಂಧನ ಖಂಡನೀಯ – ಬಿ.ಎಂ.ಭಟ್
ಬೆಳ್ತಂಗಡಿ; ರೈತರು ದೇಶದ ಅತಿ ದೊಡ್ಡ ಆಸ್ತಿ. ಆದರೆ ಅನ್ನ ನೀಡುವ ಈ ರೈತರ ಪ್ರತಿಭಟನೆಯನ್ನೇ ಸಹಿಸದ ಸರಕಾರ ರೈತ ವಿರೋದಿ, ಜನವಿರೋದಿ ಸರಕಾರವಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಅವರು ಹೇಳಿದ್ದಾರೆದೇವನಹಳ್ಳಿ ಚಲೋ ನಿರತ ರೈತರನ್ನು ಬಂಧನವನ್ನು ಖಂಡಿಸಿ ಸರಕಾರಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಮನವಿ ನೀಡಿದ ಬಳಿಕ ಅವರು ಮಾತನಾಡಿದರು . ಕೈಗಾರಿಕಾ ಪ್ರದೇಶಾಭಿವೃದ್ದಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯ ಪಟ್ಟಣಸದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾದೀನಪಡಿಸುವುದರ ವಿರುದ್ದ ನಡೆಯುತ್ತಿರುವ ನ್ಯಾಯಯುತ...
ಅರಸಿನಮಕ್ಕಿ; ಅಡಿಕೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಆಘಾತ; ವ್ಯಕ್ತಿ ಮೃತ್ಯು
ಅರಸಿನಮಕ್ಕಿ: ಇಲ್ಲಿಯ ಎಂಜಿರ ಸಮೀಪ ತೋಟವೊಂದರಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ದೋಂಟಿ ಹೆಚ್.ಟಿ. ಲೈನ್ ಗೆ ತಾಗಿ ಮದ್ದು ಸಿಂಪಡನೆ ಮಾಡುತಿದ್ದ ಉಡೈರೆ ಕೃಷ್ಣಪ್ಪ ಕುಲಾಲ್(49ವ) ರವರು ವಿದ್ಯುತ್ ಶಾಕ್ಯಾಗಿ ಮೃತ ಪಟ್ಟಿದ್ದಾರೆ. ವಿದ್ಯುತ ಆಘಾತಕ್ಕೆ ಈಡಾಗಿ ಬಿದ್ದ ಕೂಡಲೇ ಕೃಷ್ಣಪ್ಪ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಲಲಿತ, ಪುತ್ರ ಯತೀಶ್, ಪುತ್ರಿ ಶಿಲ್ಪಾರನ್ನು ಅಗಲಿದ್ದಾರೆ.
ಚಾರ್ಮಾಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳುಲು ಹೋದವನ ಮೇಲೆ ಹಲ್ಲೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಬಿಸಾಕಿ ಹಲ್ಲೆ ನಡೆಸಿದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿಯಲ್ಲಿ ಆರು ತಿಂಗಳ ಹಿಂದೆ ಕೆಲಸ ಮಾಡಿದ್ದ ಟಿಪ್ಪರ್ ವಾಹನದ ಬಾಡಿಗೆಯ 65 ಸಾವಿರ ರೂಪಾಯಿ ಹಣ ಬಾಡಿಗೆಗೆ ಕಳುಹಿಸಿದ್ದ ಮಧ್ಯವರ್ತಿ ಚಿಬಿದ್ರೆ ಗ್ರಾಮದ ಕಕ್ಕಿಂಜೆ ನಿವಾಸಿ ಮಹಮ್ಮದ್ ತೌಸಿಫ್ ಗೆ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿ ರಹೀಂ ನೀಡಲು ಬಾಕಿ ಇದ್ದು ಇದಕ್ಕಾಗಿ ಚಾರ್ಮಾಡಿ...
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ, ಬೃಹತ್ ರಕ್ತದಾನ ಶಿಬಿರ; ರಕ್ತಕ್ಕೆ ಜಾತಿ-ಧರ್ಮದ ಪರಿಮಿತಿಯಿಲ್ಲ ಗಂಗಾಧರ ಗೌಡ
ಬೆಳ್ತಂಗಡಿ: ಉತ್ಸಾಹ, ಉತ್ತಮ ನಾಯಕತ್ವ, ತ್ಯಾಗ ಬಲಿದಾನಕ್ಕೆ ಕೆಂಪೆಗೌಡರ ವ್ಯಕ್ತಿತ್ವ ಆದರ್ಶನೀಯ. ರಾಜಾಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಹೆಸರುವಾಸಿಯಾಗಿದ್ದು ಇದಕ್ಕೆ ಅವರ ಅಂದಿನ ಆಡಳಿತ್ಮಾಕ ಕಾರ್ಯವೈಖರಿಯಿಂದ ದೊಡ್ಡ ನಗರವೊಂದಕ್ಕೆ ಹಾಕಿರುವ ಭದ್ರಬುನಾದಿಯೇ ಸಾಕ್ಷಿ, ಕೆಂಪೇಗೌಡರ ಆಡಳಿತ್ಮಾಕ ವ್ಯವಸ್ಥೆ ಸದಾ ಪ್ರೇರಣದಾಯಿಯಾಗಿದ್ದಾರೆ. ರಕ್ತದಾನ ಎಲ್ಲಾದಾನಗಳಿಗಿಂತ ಶ್ರೇಷ್ಠಯುತ ದಾನವಾಗಿದೆ. ರಕ್ತಕ್ಕೆ ಜಾತಿ, ಮತ, ಧರ್ಮದ ಪರಿಮಿತಿಯಿಲ್ಲ, ಎಂದು ಮಾಜಿ ಸಚಿವ ಲಾಯಿಲ ಪ್ರಸನ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಗಂಗಾಧರ ಗೌಡ ಹೇಳಿದರು. ಅವರು ಬೆಳ್ತಂಗಡಿ ಸಂತೆಕಟ್ಟೆ ಮಂಜುನಾಥ ಸ್ವಾಮಿ ಕಲಾಮಂದಿರದ ಬಳಿ ಇರುವ ಬಯಲು ಮಂದಿರದಲ್ಲಿ ...
“ಶೌರ್ಯ” : ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಿಗೆ ಕೌಶಲಾಭಿವೃದ್ಧಿ ತರಬೇತಿ. ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ; ಡಾ ಹೆಗ್ಗಡೆ
ಧರ್ಮಸ್ಥಳ: ಜಾತಿ-ಮತ ಬೇಧವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾನವೀಯತೆಯೊಂದಿಗೆ “ಶೌರ್ಯ” ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಮಾಡುವ ಸೇವೆ ಅದ್ಭುತವಾಗಿದ್ದು, ಹೆಚ್ಚಿನ ಸಂತೋಷ ಮತ್ತು ಅಭಿಮಾನ ಉಂಟು ಮಾಡಿದೆ. ಸೇವೆ ಮಾಡುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ “ಶೌರ್ಯ” ವಿಪತ್ತು ನಿರ್ವಹಣಾ ತಂಡದ 330 ಸದಸ್ಯರಿಗೆ ಆಯೋಜಿಸಿದ ತುರ್ತು ಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿ...
ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಅಂಟೆಮಜಲು ಎಂಬಲ್ಲಿ ವ್ಯಕ್ತಿಯೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅಂಟೆಮಜಲು ನಿವಾಸಿ ಓಬಯ್ಯ ಮಲೆಕುಡಿಯ (70) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದರು ಎನ್ನಲಾಗಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜೂನ್ 26ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡುಕೊಂಡಿದ್ದಾರೆ ಎಂದು ಮೃತರ ಮಗ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಅದರಂತೆ...
ಬೆಳ್ತಂಗಡಿ; ಭಾರೀ ಗಾಳಿ ಮಳೆ ಮೊಗ್ರುಗ್ರಾಮದಲ್ಲಿ ಮನೆ, ಕೃಷಿಗೆ ಹಾನಿ; ಪಂಚಾಯತ್ ಅಧ್ಯಕ್ಷರು,ಪಿಡಿಓ ಸ್ಥಳಕ್ಕೆ ಭೇಟಿ
ಬಂದಾರು : ತಾಲೂಕಿನಲ್ಲಿ ಸುರಿಯುತ್ತಿರುವ ವಿಪರೀತ ಗಾಳಿ ಮಳೆಯ ಪರಿಣಾಮ ಮೊಗ್ರು ಗ್ರಾಮದ ಕೊಳಬ್ಬೆ ಸಿದ್ದಣ್ಣ ಎಂಬವರ ವಾಸದ ಮನೆಗೆ ಹಾನಿಯುಂಟಾಗಿದೆ. ನಡುಮನೆ,ಬರುoಗುಡೆಲು, ಪುಣ್ಕೆದಡಿ, ಅರ್ತಿದಡಿ, ಪರಕ್ಕಾಜೆ, ಕಡಮ್ಮಾಜೆ ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು ಅಡಿಕೆ ಮರಗಳು ನೆಲಕ್ಕುರುಳಿದೆ. ಕೃಷಿಗೆ ವ್ಯಾಪಕವಾದ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ಹಾಗೂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.