

ಬೆಳ್ತಂಗಡಿ; ಲೈಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏಪ್ರಿಲ್ 20ರಿಂದ 23ರ ವರೆಗೆ ನಡೆಯುವ ಬ್ರಹ್ಮ ಕಳಶೋತ್ಸವದ ಪೂರ್ವಭಾವಿ ಸಭೆ ಈ ದಿನ ಆದಿತ್ಯವಾರ ಸಾಯಂಕಾಲ ಶ್ರೀಮಠದಲ್ಲಿ ನಡೆದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರಕ್ಷಿತ್ ಶಿವರಾಮ್ ರವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಬ್ರಹ್ಮಕಲಶೋತ್ಸವದ ಉಳಿದ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಲು ಸಭೆ ರಕ್ಷಿತ್ ಶಿವರಾಂ ರವರಿಗೆ ಅಧಿಕಾರ ನೀಡಿತು. ಪ್ರೊಫೆಸರ್ ಎ ಕೃಷ್ಣಪ್ಪ ಪೂಜಾರಿಯವರು ಪ್ರಸ್ತಾವಿಸಿ ಶ್ರೀ ರಾಘವೇಂದ್ರ ಮಠ 24 ವರ್ಷದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಪೀತಾಂಬರ ಹೆರಾಜೆ ಅವರು ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕರಿಸಿದ ಮಹನೀಯರನ್ನು ನೆನೆಸಿದರು. ಪ್ರೊಫೆಸರ್ ಬಿಎ ಕುಮಾರ ಹೆಗ್ಡೆಯವರು ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳನ್ನು ನೆನೆಸಿದರು.

ಶ್ರೀ ರಕ್ಷಿತ್ ಶಿವರಾಮ್ ರವರು ಈ ಬಾರಿಯ ಬ್ರಹ್ಮ ಕಲಶೋತ್ಸವವನ್ನು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸುವುದಾಗಿ ತಿಳಿಸಿದರು. ಮುಖ್ಯ ಅರ್ಚಕ ಶ್ರೀ ರಾಘವೇಂದ್ರ ಬಾಂಗ್ಯಣ್ಣಾಯರವರು ಪೂಜಾ ವಿಧಿ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀ ವಿಟ್ಟಲ್ ಶೆಟ್ಟಿ, ಶ್ರೀಮತಿ ಸುಜಿತಾ ಬಂಗೇರ, ಶ್ರೀಮತಿ ಲೋಕೇಶ್ವರಿ ವಿನಯ ಚಂದ್ರ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಅಧಿಕಾರಿ ಶ್ರೀ ಸುರೇಂದ್ರ, ಶ್ರೀ ಮಹಾಬಲ ಶೆಟ್ಟಿ ಮುಂತಾದವರು
ಶ್ರೀ ಸುರೇಶ್ ಶೆಟ್ಟಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಶ್ರೀವಸಂತ ಸುವರ್ಣ ರವರು ವಂದಿಸಿದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಗಣ್ಯರು, ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಭೆಯಲ್ಲಿ ಹಾಜರಿದ್ದರು.
