


ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕಲ್ಮಂಜ, ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ಗೌಡ, ಸದಸ್ಯರಾಗಿ, ಕೃಷ್ಣ ಮಲೆಕುಡಿಯ, ಶ್ರೀಮತಿ ಸುಂದರಿ,ಶ್ರೀಮತಿ ಮಹಾಲಕ್ಷ್ಮಿ, ಸಂತೋಷ್ ಕಡಂಬು, ಪ್ರವೀಣ್ ಬಿ, ಗಂಗಾಧರ ಗೌಡ, ರಘುಚಂದ್ರ ಗುಡಿಗಾರ್ ಮತ್ತು ಪ್ರಧಾನ ಅರ್ಚಕರಾಗಿ ರಾಜೇಶ್ ಹೊಳ್ಳ
ನೇಮಕವಾಗಿದ್ದಾರೆ.
