ಬೆಳ್ತಂಗಡಿ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವನ್ನು ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿ ಸೋಲನ್ನು ಕಂಡಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಸಾಮಾನ್ಯ ಕ್ಷೇತ್ರದಿಂದ ಕೆ. ರಮೇಶ್ ರಾವ್ (497), ಧನಂಜಯ ಗೌಡ ಕಳೆಂಜ (559), ವಿಜಯ ಕುಮಾರ್ ಹೆಚ್. (583), ಜಯರಾಮ ಪಾಳಂದೆ. (435), ಆನಂದ ಗೌಡ ಎಂ (501), ಕೆ. ಹೇಮಂತ್ ಗೌಡ (463), ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಮೋಹನ ಪೂಜಾರಿ ಬಿ. (494), ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಧನಂಜಯ ಬಂಡೇರಿ (507), ಮಹಿಳಾ ಕ್ಷೇತ್ರದಿಂದ ಗಾಯತ್ರಿ ಹೆಚ್. ಗೌಡ (524), ವಿಜಯಲಕ್ಷ್ಮೀ ಕೆ. (485 ), ಪ.ಜಾತಿ ಕ್ಷೇತ್ರದಿಂದ ರಾಜು (506), ಪ. ಪಂಗಡ ಕ್ಷೇತ್ರದಿಂದ ಡೀಕಯ್ಯ ಎಂ.ಕೆ. (575) ಗೆಲುವನ್ನು ಪಡೆದಿದ್ದಾರೆ.
