
ಧರ್ಮಸ್ಥಳ: ನವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರವಚನ ಮಂಟಪದಲ್ಲಿ ಗುರುವಾರ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಕುಮಾರಿ ಸುಪ್ರೀತಾ ಧರ್ಮಸ್ಥಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಮೃದಂಗ ವಾದಕರಾಗಿ ವಿದ್ವಾನ್ ಪುತ್ತೂರು ನಿಕ್ಷಿತ್ ಮತ್ತು ಮಾ. ವರ್ಚಸ್ ಧರ್ಮಸ್ಥಳ, ವಯಲಿನ್ ವಾದಕರಾಗಿ ವಿದ್ವಾನ್ ನಿಶಾಂತ್ ರಾವ್, ಬೆಂಗಳೂರು, ಘಟವಾದಕರಾಗಿ ವಿದ್ವಾನ್ ಫಣೀಂದ್ರ ಬೆಂಗಳೂರು ಹಾಗೂ ಖಂಜಿರದಲ್ಲಿ ಅತ್ಯುಲ್ಯತೇಜ, ವೇಣೂರು ಸಹಕರಿಸಿದರು.
ಕಂಚಿಮಾರು ಟೈಗರ್ಸ್ ತಂಡದವರಿಂದ ಹುಲಿವೇಷ ಪ್ರದರ್ಶನ ನಡೆಯಿತು.

