Home ಸ್ಥಳೀಯ ಸಮಾಚಾರ ಬಳ್ಳಮಂಜ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಪದಗ್ರಹಣ

ಬಳ್ಳಮಂಜ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ಪದಗ್ರಹಣ

146
0

ಬೆಳ್ತಂಗಡಿ; ಹುಟ್ಟಿನಿಂದ ಸಾವಿನ ವರೆಗೆ ಬರುವ ಸಾಕಷ್ಟು ಸಂಕಷ್ಟಗಳಿಗೆ ಸಹಕಾರ ನೀಡುವುದು, ಗ್ರಾಮಿಣ ಭಾಗದಲ್ಲಿರುವ ಸಮಸ್ಯೆಗಳನ್ನ ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮೂಲಬೂತ ಸೌಕರ್ಯಗಳಿಗೆ ಅನುದಾಗಳನ್ನ ಒದಗಿಸಿ ಅಭಿವೃದ್ದಿ ಮಾಡುವುದೂ ಯೋಜನೆಯ ಆಶಯ 42 ವರ್ಷಗಳ ಹಿಂದೆ ತಾಲೂಕಿನಲ್ಲಿ ಇದ್ದ ಕಡು ಬಡತನವನ್ನ ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು 1982 ರಲ್ಲಿ ಗ್ರಾಮಾಭಿವೃದ್ದಿ ಯೋಜನೆಯನ್ನೂ ಜಾರಿಗೆ ತಂದರು ಇದರ ಮುಖ್ಯ ಉದ್ದೇಶ ಸಾಲ ನೀಡುವುದು ಅಲ್ಲ ಬದಲಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬುವುದೇ ಆಗಿದೆ ಎಂದು ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಹೇಳಿದರು
ಅವರು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಮಡಂತ್ಯಾರು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮಚ್ಚಿನ, ಪಾಲಡ್ಕ, ಕುದ್ರಡ್ಕ, ಕುತ್ತಿನ ಒಕ್ಕೂಟಗಳ ಪದಗ್ರಹಣ ಹಾಗು 38 ನೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು


42 ಹಿಂದೆ ಅನುಭವಿಸಿದ ಕಷ್ಟದ ದಿನಗಳು ಎಲ್ಲರಿಗೂ ನೆನಪಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಊಟಕ್ಕೆ ಅಕ್ಕಿ, ಪಾತ್ರೆ, ಅಡಿಕೆ, ತೆಂಗಿನ ಗಿಡ, ಗಳನ್ನ ನೀಡಿ ಜನರ ಪರಿವರ್ತನೆ ಯನ್ನ ಮಾಡುವ ಕೆಲಸವನ್ನು ಯೋಜನೆಯು ಮಾಡುತ್ತಾ ಬಂದಿದೆ
ಕೃಷಿ ಅಭಿವೃದ್ಧಿಯ ಹಾಗು ಮೂಲಬೂತ ಸೌಕರ್ಯಗಳಿಗೆ ಕ್ಷೇತ್ರದಿಂದ ಅನುದಾನ ಗಳನ್ನ ಒದಗಿಸುವ ಮೂಲಕ ಬಡವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ಯನ್ನ ತರಲಾಯಿತು
ಬದಲಾದ ಕಾಲಘಟ್ಟದಲ್ಲಿ ಗುಂಪಿನ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ಆರ್ಥಿಕ ಚೈತನ್ಯ ನೀಡುವ ಕೆಲಸವನ್ನು ಯೋಜನೆಯೂ ಮಾಡುತ್ತಿದೆ ಬ್ಯಾಂಕ್ ಹಾಗು ಸದಸ್ಯರ ಮದ್ಯದಲ್ಲಿ ಯೋಜನೆಯೂ ಕೊಂಡಿಯಾಗಿ ಮಾತ್ರಾ ಕೆಲಸವನ್ನ ಮಾಡುತ್ತಿದೆ ಹಾಗಾಗೀ ಗುಂಪಿನ ಸದಸ್ಯರು ತಪ್ಪು ಸಂದೇಶಗಳಿಗೆ ಕಿವಿ ಕೊಡದೇ ಗುಂಪಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು

ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಶುಭ ಸಂದೇಶವನ್ನು ಗೀತಾ ಲತಾ ಓದಿದರು


ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅನುವಂಶಿಕ ಆಡಳಿತ ಮುಕ್ತೇಸರಾದ ಶ್ರೀ ಕ್ಷೇತ್ರ ಬಳ್ಳ ಮಂಜ ಹರ್ಷ ಸಂಪಿಗೆತ್ತಾಯ ಸತ್ಯ ನಾರಾಯಣ ಪೂಜೆಯ ಫಲ ಎಲ್ಲರಿಗೂ ದೊರಕಲಿ , ನೂತನ ವಾಗಿ ರಚನೆಗೊಂಡ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು ಮುಖ್ಯ ಅತಿಥಿಗಳಾಗಿ ನಿವೃತ್ತ ಉಪ ಕೃಷಿ ನಿರ್ದೇಶಕರಾದ ವಿಶ್ವನಾಥ ಬಂಗೇರಾ, ಜನ ಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಗೋಪಾಲ ಕೊಲಾಜೆ, ಜೆಸಿಐ ಅಧ್ಯಕ್ಷ ರಾದ ವಿಕೇಶ್ ಮಾನ್ಯ, ದೈವ ಆರಾಧಕರಾದ ಸದಾನಂದ ಪೂಜಾರಿ, ಪ್ರಗತಿ ಪರ ಕೃಷಿಕರಾದ ಕಾಂತಪ್ಪ ಗೌಡ ನಿಡ್ಡಜೆ ಭಾಗವಹಿಸಿದ್ದರು, ಸಬಾ ಅಧ್ಯಕ್ಷತೆಯನ್ನು 38 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಹರ್ಷ ಬಳ್ಳಮಂಜ ವಹಿಸಿ ಮಾತನಾಡುತ್ತ ಸರ್ವರ ಸಹಕಾರದಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮಚ್ಚಿನ ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಸುವರ್ಣ, ಪಾಲಡ್ಕ ದ ನಾರಾಯಣ ಗೌಡ, ಕುದ್ರಡ್ಕ ದ ಸುರೇಶ್ ಹಾಗು ನೂತನ ಮಚ್ಚಿನ ಒಕ್ಕೂಟದ ಅಧ್ಯಕ್ಷ ರಾದ ಸುಧಾ, ಕುತ್ತಿನ ಜಯ ಪೂಜಾರಿ, ಪಾಲಡ್ಕ ದ ಕುಸುಮಾವತಿ, ಕುದ್ರಡ್ಕ ವಿಜಯ ಮಡೆಕ್ಕಿಲ್ಲ, ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು ವಲಯ ಅಧ್ಯಕ್ಷರಾದ ಸತೀಶ್ ಆಚಾರ್ಯ ಹಾಜರಿದ್ದರು ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ, ಸ್ವಾಗತಿಸಿದರು ವಲಯ ಮೇಲ್ವಿಚಾರಕ ರಾದ ವಸಂತ ನಿರೂಪಿಸಿದರು ಅಂಗನವಾಡಿ ಶಿಕ್ಷಕರಾದ ಕುಮಾರಿ ಪುಷ್ಪಾವತಿ ಧನ್ಯವಾದವಿತ್ತರು ಮಚ್ಚಿನ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯಾದ ಪರಮೇಶ್ವರ್, ಕುದ್ರಡ್ಕ ಸೇವಾ ಪ್ರತಿನಿಧಿ ನಂದಿನಿ ಸಹಕರಿಸಿದರು 70 ವರ್ಷ ದಾಟಿದ ಹಿರಿಯ ಹಾಗು ಪಾನಮುಕ್ತ ಸದಸ್ಯರನ್ನ ಗೌರವಿಸಲಾಯಿತು

LEAVE A REPLY

Please enter your comment!
Please enter your name here