ಜು20 ರಿಂದ ಕಡಮಗುಂಡಿ ಜಲಪಾತಕ್ಕೆ ಪ್ರವೇಶ ನಿಷೇಧ
ಬೆಳ್ತಂಗಡಿ: ಮಳೆಗಾಲದಲ್ಲಿ ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟದಜಲಪಾತಗಳು ಹಸಿರಿನ ನಡುವೆ ರುದ್ರರಮಣೀಯವಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚಿನಪ್ರವಾಸಿಗರನ್ನುಆಕರ್ಷಿಸುತ್ತದೆ. ಕಳೆದ ಕೆಲ ದಿನಗಳಿಂದ ನಾಡಿನಲ್ಲಿ ಉತ್ತಮ ಮಳೆ ಸುರಿಯುತ್ತಿದ್ದ ಜಿಲ್ಲೆಯಲ್ಲಿ ಆರೆಂಜ್ ಆಲರ್ಟ್ ಘೋಷಣೆಯಾದ ಪರಿಣಾಮ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಯ ಹಿನ್ನಲೆ ನಾಳೆಯಿಂದ ಜು. 20 ರಿಂದ ಕಡಮಗುಂಡಿ, ಬೊಲ್ಲೆ ಜಲಪಾತ ವೀಕ್ಷಣೆಗೆ ಮುಂದಿನ ಆದೇಶದವರೆಗೆ ನಿಷೇಧ ಹೇರಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಲಯ ಪ್ರಕಟಣೆ ತಿಳಿಸಿದೆ.
ಬೆಳ್ತಂಗಡಿ: ಬಂದಾರು ಹಟ್ಟಿಗೆ ನುಗ್ಗಿ ಕರುವಿನ ಮೇಲೆ ದಾಳಿ ಮಾಡಿದ ಚಿರತೆ
ಬೆಳ್ತಂಗಡಿ : ಬಂದಾರು ಗ್ರಾಮ ಪೆರ್ಲ -ಬೈಪಾಡಿ ಅಡೆoಕಿರಿಮಜಲು ಸೇಸಪ್ಪ ಗೌಡ ಗೌಡರ ದನದ ಹಟ್ಟಿಯಲ್ಲಿ ಜುಲೈ 19 ರಂದು ಮುಂಜಾನೆ ಸರಿ ಸುಮಾರು 2.30 ಗಂಟೆಗೆ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.ಕರುವಿನ ಕುತ್ತಿಗೆಗೆ ಚಿರತೆ ಕಚ್ಚಿದ್ದು ಗಾಯಗಳಾಗಿದೆ.ಹಲವಾರು ದಿನಗಳಿಂದ ಕಾಡoಡ, ಬೈಪಾಡಿ ಪ್ರದೇಶದಲ್ಲಿ ತಿರುಗಾಡುತಿದ್ದು. ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆಯವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಳ್ತಂಗಡಿ; ಮದ್ದಡ್ಕದಲ್ಲಿ ಬೈಕ್-ಸ್ಕೂಟಿ ಅಪಘಾತ ಬೈಕ್ ಸವಾರ ಸಾವು
ಬೆಳ್ತಂಗಡಿ; ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಮದ್ದಡ್ಕ ಸಮೀಪ ಬೈಕ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.ಬಂಟ್ವಾಳದ ಕಾಲೇಜೊಂದರ ವಿದ್ಯಾರ್ಥಿ,ಬಳ್ಳಮಂಜ ನಿವಾಸಿ ಕೌಶಿಕ್ (19 ) ಮೃತಪಟ್ಟ ಯುವಕನಾಗಿದ್ದಾನೆ.ಹಿಂಬದಿ ಸವಾರ ಮಡಂತ್ಯಾರಿನ ಭರತ್ (20) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಚಲಿಸುತ್ತಿದ್ದ ವೇಳೆ ಸಂಪರ್ಕ ರಸ್ತೆಯಿಂದ ಸ್ಕೂಟಿ ಏಕಾಏಕಿ ಅಡ್ಡ ಬಂದಿರುವುದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಪರಿಸರವು ಅಪಘಾತ ವಲಯವಾಗಿದ್ದು ಇಲ್ಲಿ ಹಲವಾರು...
ಮೂಡಬಿದಿರೆ : ತಲ್ವಾರ್ ಹಿಡಿದು ಯುವಕನಿಂದ ಭಯದ ವಾತಾವರಣ ಸೃಷ್ಟಿ; ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವಕರು
ಮೂಡಬಿದಿರೆ : ಯುವಕನೊಬ್ಬ ತಲ್ವಾರ್ ಹಿಡಿದು ಮೂಡಬಿದಿರೆ ಬಸ್ ನಿಲ್ದಾಣದ ಸುತ್ತಮುತ್ತ ಜು.18 ರಂದು ಸಂಜೆ ಭಯದ ವಾತಾವರಣ ಸೃಷ್ಟಿಸಿ ಬಳಿಕ ಮೊಬೈಲ್ ಅಂಗಡಿಯೊಂದಕ್ಕೆ ಹೋಗಿ ತಲ್ವಾರ್ ತೋರಿಸಿ ಬೊಬ್ಬೆ ಹಾಕಿ ಮೊಬೈಲ್ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಮೊಬೈಲ್ ಅಂಗಡಿಯಲ್ಲಿ ತಲ್ವಾರ್ ಹಿಡಿದು ಬೆದರಿಕೆ ಹಾಕುವ ವೇಳೆ ಹೊರಗಡೆ ಇದ್ದ ಯುವಕರ ತಂಡವೊಂದು ಸಮಯ ಪ್ರಜ್ಞೆಯಿಂದ ಯುವಕನ ಕೈಯಿಂದ ತಲ್ವಾರ್ ಎಳೆದು ಹಿಡಿದು ಮೂಡಬಿದಿರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ತಲ್ವಾರ್ ಹಿಡಿದು ಬೆದರಿಸಿದ ಯುವಕ ಬಂಟ್ವಾಳ ತಾಲೂಕಿನ ನಿವಾಸಿ ರಾಜೇಶ್ ಎಂದು ತಿಳಿದು ಬಂದಿದ್ದು...
ಬೆಳ್ತಂಗಡಿ : ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನ
ಬೆಳ್ತಂಗಡಿ : ತನ್ನ ಮನೆಯಿಂದ ಕೆಲಸದ ನಿಮ್ಮಿತ್ತ ಬಂದಿದ್ದ ಯುವಕನ ಬೈಕ್ ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ನಗರದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕಲ ಗ್ರಾಮದ ಬೇರ್ಕಲ ನಿವಾಸಿ ಸ್ವರೂಪ್ ಎಂಬಾತ ಜು.16 ರಂದು ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಅಕ್ಷಯ ಜೆರಾಕ್ಷ್ ಅಂಗಡಿ ಪಕ್ಕದಲ್ಲಿ KA-21-V-8978 ನಂಬರಿನ ಬಜಾಜ್ ಸಿಟಿ 100 ಬೈಕ್ ಪಾರ್ಕಿಂಗ್ ಮಾಡಿ ಬೇರೆ ಕೆಲಸಕ್ಕೆಂದು ಹೋಗಿ ವಾಪಸ್ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗಲು 11:30 ಕ್ಕೆ ಬೈಕ್ ಬಳಿ ಬಂದಾಗ ಕಾಣಿಯಾಗಿತ್ತು. ಈ...
ಭಾರೀ ಮಳೆ ಮುನ್ಸೂಚನೆ ಜು.18 ಶನಿವಾರ ಶಾಲೆಗಳಿಗೆ ರಜೆ ಘೋಷಣೆ
ಮಂಗಳೂರು, ಜು.17: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜುಲೈ 18, 2026 (ಶನಿವಾರ) ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ವಸತಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ವಸತಿ ಪದವಿ ಪೂರ್ವ ಕಾಲೇಜುಗಳಿಗೆ (12ನೇ...
ದಿಡುಪೆ- ಸಂಸೆ ರಸ್ತೆಯಲ್ಲಿ ಅನಧಿಕೃತ ಸಂಚಾರ: ದಂಡದ ರುಚಿ ತೋರಿಸಿದ ಅರಣ್ಯ ಇಲಾಖೆ
ಬೆಳ್ತಂಗಡಿ; ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸರಹದದ್ದಿನಲ್ಲಿರುವ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ದಿಡುಪೆ-ಸಂಸೆ ರಸ್ತೆಯಲ್ಲಿ ಅನಧಿಕೃತವಾಗಿ ಸಂಚರಿಸಿ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟವರ ವಿರುದ್ಧ ಅರಣ್ಯ ಇಲಾಖೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಿದೆ.ದಿಡುಪೆ- ಸಂಸೆ ರಸ್ತೆಯಲ್ಲಿ ವನ್ಯಜೀವಿಗಳ ಓಡಾಟ, ಅಪಾಯಕಾರಿ ತೊರೆ, ಹಳ್ಳಗಳು ಇವೆ. ಅಲ್ಲದೆ ಮಳೆಗಾಲದಲ್ಲಿ ಈ ರಸ್ತೆ ಅತ್ಯಂತ ದುರ್ಗಮ ಹಾಗೂ ಅಪಾಯಕಾರಿಯಾಗಿದೆ .ಈ ಕಾರಣದಿಂದ ಇಲ್ಲಿನ ಸ್ಥಳೀಯ ಜನರಿಗೆ ಮಾತ್ರ ಪ್ರಸ್ತುತ ಸಂಚಾರಕ್ಕೆ ಅವಕಾಶವಿದೆ. ಪ್ರವಾಸಿಗರಿಗೆ ಈ ರಸ್ತೆಯ ಮೂಲಕ...
ಆರೋಗ್ಯ ಸಚಿವ ಯು.ಟಿ. ಖಾದರ್ ಧರ್ಮಸ್ಥಳ ಭೇಟಿ
ಬೆಳ್ತಂಗಡಿ: ಆರೋಗ್ಯ ಸಚಿವ ಯು.ಟಿ. ಖಾದರ್ ಶುಕ್ರವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಸೌಹಾರ್ದಯುತ ಮಾತುಕತೆ ನಡೆಸಿದರು.ಹೆಗ್ಗಡೆಯವರು ಸಚಿವರನ್ನು ಗೌರವಿಸಿ, ಅಭಿನಂದಿಸಿ ಶುಭ ಹಾರೈಸಿದರು.ಸಚಿವರು ಆಗಮಿಸಿದಾಗ ಡಿ. ಹರ್ಷೇಂದ್ರ ಕುಮಾರ್ ಅವರಿಗೆ ಮಾಲಾರ್ಪಣೆಯೊಂದಿಗೆ ಸ್ವಾಗತಿಸಿದರು.
ಚೊಚ್ಚಲ ಪ್ರಯತ್ನದಲ್ಲೇ ರಾಜ್ಯದ ಗಮನ ಸೆಳೆದ ವಿದ್ವತ್ ನ ನೀಟ್ ಫಲಿತಾಂಶಪ್ರತಿಷ್ಠಿತ AIIMS ಪ್ರವೇಶಾತಿಗೆ ಬೇಕಾದ ಅರ್ಹತೆ ಪಡೆದ ವಿದ್ಯಾರ್ಥಿಗಳು
ಬೆಳ್ತಂಗಡಿ: CET ಮತ್ತು JEE ಫಲಿತಾಂಶದಲ್ಲಿ ರಾಜ್ಯಕ್ಕೆ 7 ನೇ Rank ತಂದು ಗಮನ ಸೆಳೆದಿದ್ದ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು, ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NTA ಗುರುವಾರ NEET UG ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗೆ ನಡೆದ ಪರೀಕ್ಷೆಯಲ್ಲೂ ಉತ್ತಮಸಾಧನೆ ಮಾಡಿದೆ. ಪ್ರಪ್ರಥಮ ಬಾರಿಗೆ ಕಾಲೇಜಿನಿಂದ 3 ವಿದ್ಯಾರ್ಥಿಗಳು AIIMS ಗೆ ಅರ್ಹತೆ ಪಡೆಯಲು ಬೇಕಾದ ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ವಿದ್ವತ್ ಪಿಯು ಕಾಲೇಜಿನ ಸಂಪತ್ ಕುಮಾರ್ ಪುಟ್ಟಿ ರಾಷ್ಟ್ರಮಟ್ಟದಲ್ಲಿ 1059 Rank ನೊಂದಿಗೆ 99.8531423 ಪರ್ಸೆಂಟೈಲ್ ಗಳಿಸಿದ್ದು,...
ಮಂಗಳೂರು; ದರೋಡೆ ಪ್ರಕರಣ ನೇಪಾಳ ಮೂಲದ ಮೂವರು ಆರೋಪಿಗಳ ಬಂಧನ 10 ಲಕ್ಷ ಮೌಲ್ಯದ ಸೊತ್ತುಗಳು ವಶಕ್ಕೆ
ಮಂಗಳೂರು: ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಕೇವಲ ಐದು ದಿನಗಳಲ್ಲಿ ಭೇದಿಸಿರುವ ಬರ್ಕೆ ಪೊಲೀಸರು, ನೇಪಾಳ ಮೂಲದ ಅಂತಾರಾಷ್ಟ್ರೀಯ ಮನೆಗಳ್ಳರ ಜಾಲಕ್ಕೆ ಸೇರಿದ ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳನ್ನು ತಿಲಕ್ ಕುಮಾರ್ ಖಡ್ಕ (36), ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ (33) ಹಾಗೂ ದಿಪೆಂರ್ದ ರಸೈಲಿ (25) ಎಂದು ಗುರುತಿಸಲಾಗಿದೆ. ಮೂವರೂ ನೇಪಾಳ ಮೂಲದವರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ನಗರದ ಉರ್ವ ಮಾರ್ಕೆಟ್ ಸಮೀಪದ ಮಠದಕಣಿಯಲ್ಲಿರುವ ಮನೆಯೊಂದರಲ್ಲಿ...















