ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನ ಬಿಡುಗಡೆ
ಶಿವಮೊಗ್ಗ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಷಡ್ಯಂತ್ರನಡೆಸಿದ್ದಾನೆ ಎಂದು ಆರೋಪಿಯಾಗಿ ಜೈಲು ಪಾಲಾದ ಚಿನ್ನಯ್ಯ ಕೊನೆಗೂ ಶಿವಮೊಗ್ಗ ಜೈಲಿನಿಂದ ಡಿ.18 ರಂದು ಬೆಳಗ್ಗೆ ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಮಾಧ್ಯಮಗಳ ಮುಂದೆ ಬರದೆ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಜೊತೆಯಲ್ಲಿ ತೆರಳಿದ್ದಾನೆ.ಜಾಮೀನು ಸಿಕ್ಕಿದರೂ ನ್ಯಾಯಾಲಯ ಸೂಚಿಸಿದ್ದ ಶೂರಿಟಿ ನೀಡದ ಕಾರಣ ಚಿನ್ನಯ್ಯನಿಗೆ ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ ಇದೀಗ ಬೆಳ್ತಂಗಡಿ ನ್ಯಾಯಾಲಯದಲ್ಲಿ ಡಿ17ರಂದು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿತ್ತು. ಇಂದು ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆಯಾಗಿದ್ದಾನೆ. ಮಾದ್ಯಮಗಳೊಂದಿಗೆ ಮಾತನಾಡಬಾರದು ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು...
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿಯನ್ನು ಮತ್ತೆ ಗಡಿಪಾರು ಮಾಡಿ ಆದೇಶ
ಬೆಳ್ತಂಗಡಿ : ಸೌಜನ್ಯ ಪರ ಹೋರಾಟದ ನೇತೃತ್ವ ವಹಿಸಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಗಡಿಪಾರು ಮಾಡಿ ಎರಡನೇ ಭಾರಿಗೆ ಪುತ್ತೂರು ಎ.ಸಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಎ.ಸಿ. ಸ್ಟೇಲಾ ವರ್ಗಿಸ್ ಡಿ.17 ರಂದು ಈ ಆದೇಶ ಹೊರಡಿಸಿದ್ದಾರೆ. ಮಹೇಶ್ ಶೆಟ್ಟಿಯನ್ನು ಈ ಹಿಂದೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು ಇದನ್ನು ಮರು ಪರಿಶೀಲಿಸಲು ಹೈಕೋರ್ಟ್ ಸೂಚಿಸಿತ್ತು ಇದೀಗ ಹೈಕೋರ್ಟ್ ಆದೇಶದಂತೆ ಮರು ಪರಿಶೀಲನೆ ಮಾಡಿ ಒಂದು ವರ್ಷಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಗಡಿಪಾರು ಆದೇಶ ಪ್ರತಿ...
ಕಾಶಿಬೆಟ್ಟು ಹೆದ್ದಾರಿಯಲ್ಲಿ ರಿಕ್ಷಾ ಪಲ್ಟಿ ಇಬ್ಬರಿಗೆ ಗಾಯ
ಬೆಳ್ತಂಗಡಿ : ಉಜಿರೆ ಕಡೆ ಹೋಗುತ್ತಿದ್ದ ಆಪೆ ಆಟೋ ರಿಕ್ಷಾ ಕಾಶಿಬೆಟ್ಟು ಇಂಡಸ್ಟ್ರಿಯಲ್ ಪ್ರದೇಶದ ಮುಂದೆ ರಸ್ತೆಯಲ್ಲಿ ನಿಯಂತ್ರಣ ತಪ್ಪಿಆಪೆ ಆಟೋ ರಿಕ್ಷಾ ಪಲ್ಟಿ ಹೋಡೆದಿದೆ. ಆಟೋದಲ್ಲಿ ಇಬ್ಬರು ಮಹಿಳೆಯರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ; ಲಾಯಿಲ ಸೆತುವೆ ಬಳಿಅಪರಿಚಿತ ಮೃತದೇಹ ಪತ್ತೆ
ಬೆಳ್ತಂಗಡಿ: ಲಾಯಿಲ ಸೇತುವೆ ಬಳಿ ಅನಾರೋಗ್ಯ ಅಥವಾ ಬೇರೆ ಕಾರಣದಿಂದ ಮೃತಪಟ್ಟ ಅಪರಿಚಿತ ಶವ ಪತ್ತೆಯಾದ ಘಟನೆ ಡಿ.17 ರಂದು ನಡೆದಿದೆ. ಸ್ಥಳೀಯರು ಅಪರಿಚಿತ ಮೃತದೇಹ ನೋಡಿ ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅನಂದ್.ಎಮ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸಲು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮಹಜರು ನಡೆಸಿದ ಬಳಿಕ ಶವಪರೀಕ್ಷೆಗಾಗಿ ಸಾಯಿರಾಮ್ ಅಂಬುಲೆನ್ಸ್ ಮೂಲಕ ಶವವನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.ಈ ವೇಳೆ ಅಂಬುಲೆನ್ಸ್ ಚಾಲಕ ಪವನ್ ಬಂಗೇರ, ಕರುಣಾಕರ ರೆಂಕೆದಗುತ್ತು...
ನೂತನ ಬಿಷಪ್ ಜೇಮ್ಸ್ ಪಟ್ಟೇರಿಲ್ ಅವರಿಂದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಕ್ಷೇತ್ರದ ಪರವಾಗಿ ಬಿಷಪ್ ಅವರನ್ನು ಡಾ.ಡಿ ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದರು. ಬಿಷಪ್ ಅವರೊಂದಿಗೆ ಧರ್ಮಪ್ರಾಂತ್ಯದ ಚಾನ್ಸಲರ್ ವಂ ಲಾರೆನ್ಸ್, ಪಾ ಅಬ್ರಹಾಂ ಪಟ್ಟೇರಿಲ್, ಫಾ ಜೋಸೆಫ್ ವಾಳೂಕಾರನ್, ರುಡ್ ಸೆಟ್ ಉಪನ್ಯಾಸಕಅಬ್ರಹಾಂ ಜೇಮ್ಸ್,ಧರ್ಮಸ್ಥಳ ಚರ್ಚ್ ಪಾಲನಾ ಮಂಡಳಿ ಸದಸ್ಯರಾದ ಟಿ.ವಿ ದೇವಸ್ಯ, ಜೋಮಿ, ಹಾಗು ಇತರರು ಇದ್ದರು
ಧರ್ಮಸ್ಥಳ ಪ್ರಕರಣ ಚಿನ್ನಯ್ಯನಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನಿಗೆ ದ.ಕ ಜಿಲ್ಲಾ ಕೋರ್ಟ್ ನ.24 ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರೂ ಬಾಂಡ್ ಮತ್ತು ಇಬ್ಬರ ಜಾಮೀನುದಾರರ ಕೊರೆತೆಯಿಂದ 23 ದಿಗಳಿಂದ ಬಿಡುಗಡೆ ಬಾಗ್ಯ ಬಂದಿರಲಿಲ್ಲ. ಆರೋಪಿ ಚಿನ್ನಯ್ಯನಿಗೆ ಸಹಾಯ ಮಾಡಲು ಪತ್ನಿ ಮಲ್ಲಿಕಾ ಮೂಲಕ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಡಿ.17 ರಂದು ಒಂದು ಲಕ್ಷದ ಬಾಂಡ್ ನೀಡಲು ಮತ್ತು ಇಬ್ಬರು ಜಾಮೀನದಾರರನ್ನು ಕರೆದುಕೊಂಡು ಬಂದು ಕಾನೂನು ಪಕ್ರಿಯೆ ಮುಗಿಸಿ ಶಿವಮೊಗ್ಗ ಜೈಲಿನತ್ತ ಪ್ರಯಾಣ ಮಾಡಿದ್ದಾರೆ. ಇನ್ನೂ ಬೆಳ್ತಂಗಡಿ...
ಬೆಳ್ತಂಗಡಿ ಬೆಳಗ್ಗೆ ಬಂದ್ ಆದ ಇಂದಿರಾ ಕ್ಯಾಂಟೀನ್ ಮಧ್ಯಾಹ್ನ ಓಪನ್ ರಕ್ಷಿತ್ ಶಿವರಾಂ ಮಧ್ಯಪ್ರವೇಶದಿಂದ ಸಮಸ್ಯೆಗೆ ಪರಿಹಾರ
ಬೆಳ್ತಂಗಡಿ : ಮೂರು ತಿಂಗಳ ಹಿಂದೆ ರಾಜ್ಯ ಸರಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರನ ಸಮಸ್ಯೆಯಿಂದ ಡಿ.17 ರಂದು ಬಂದ್ ಮಾಡಲಾಗಿತ್ತು. ಇದೀಗ ಬೆಳ್ತಂಗಡಿ ಸಮಾಚಾರ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಮಧ್ಯಾಹ್ನ ವೇಳೆಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರವಾಗಿ ಮತ್ತೆ ಓಪನ್ ಮಾಡುವಂತಾಗಿದೆ. ಗುತ್ತಿಗೆದಾರ ಸಮರ್ಪಕವಾಗಿ ದಾಖಲೆಗಳನ್ನು ಸರಕಾರಕ್ಕೆ ನೀಡದೆ ಆತನಿಗೆ ಹಣ ಸಂದಾಯವಾಗಿರಲ್ಲಿಲ್ಲ ಈ ಕಾರಣದಿಂದ ಗುತ್ತಿಗೆದಾರ ಡಿ.17 ರಂದು ಬಂದ್ ಮಾಡಿ ಹೋಗಿದ್ದ ಬಗ್ಗೆ ಬೆಳ್ತಂಗಡಿ ಸಮಾಚಾರ ವೆಬ್ ಸೈಟ್...
ಡಿ 20ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಸಭೆ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಡಿ 20 ಶನಿವಾರ ದಂದುಜನರ ಬಳಿಗೆ-ತಾಲೂಕು ಆಡಳಿತಪಂಚಾಯತ್ ಮಟ್ಟದಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ.ಪೂರ್ವಾಹ್ನ - 9.30 - ಗ್ರಾಮ ಪಂಚಾಯತ್ ಮಚ್ಚಿನ.ಪೂರ್ವಾಹ್ನ -11.00 - ಗ್ರಾಮ ಪಂಚಾಯತ್ ಮಾಲಾಡಿಅಪರಾಹ್ನ - 2.00 - ಸಿಎ ಬ್ಯಾಂಕ್ ಹಾಲ್ ಕಳಿಯಸಂಜೆ - 4.00 - ಗ್ರಾಮ ಪಂಚಾಯತ್ ಬಳೆಂಜಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ
ಮಂಗಳೂರು ಕಾರಿನಲ್ಲಿ ಮಾದಕ ವಸ್ತು MDMA ಸಾಗಾಟಕ್ಕೆ ಯತ್ನ ಆರೋಪಿ ಬಂಧನ
ಮಂಗಳೂರು : ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು MDMA ಸಾಗಿಸುತ್ತಿದ್ದ ರೌಡಿಶೀಟರ್ ಒಬ್ಬನನ್ನು ಮೂಡಬಿದಿರೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ ಗೆ ಶಿರ್ತಾಡಿ ಕಡೆಯಿಂದ ಬಂಟ್ವಾಳ ಕಡೆಗೆ ಅಕ್ರಮವಾಗಿ ಮಾದಕ ವಸ್ತು ಡ್ರಗ್ಸ್ ಸಾಗಾಟ ಮಾಡುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.16 ರಂದು ಸಂಜೆ 5:30 ಕ್ಕೆ ಮೂಡಬಿದಿರೆ ಪ್ರಾಂತ್ಯ ಗ್ರಾಮದ ಕೊಡಂಗಲ್ಲು ರಸ್ತೆಯಲ್ಲಿ KA-09-MJ-7034 ನಂಬರಿನ ಹುಂಡೈಯಿ ಐ20 ಕಾರನ್ನು ಪೊಲೀಸರ ತಂಡ...
ಮೂರೇ ತಿಂಗಳಿನಲ್ಲಿ ಬಂದ್ ಆದ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್
ಬೆಳ್ತಂಗಡಿ; ಬಹುದಿನಗಳ ಬೇಡಿಕೆಯ ಬಳಿಕ ಬೆಳ್ತಂಗಡಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಿನಲ್ಲಿ ಬಂದ್ ಆಗಿದ್ದು ಜನರಲ್ಲಿ ನಿರಾಸೆ ಮೂಡಿಸಿದೆ.ಅಕ್ಟೋಬರ್ ತಿಂಗಳಿನಲ್ಲಿ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ಅನ್ನು ಉಸ್ತುವಾರಿ ಸಚಿವರು ಉದ್ಘಾಟಿಸಿದ್ದರುಉದ್ಘಾಟನಾ ಭಾಷಣದಲ್ಲಿಯೇ ಸಚಿವರು ಟೆಂಡರು ಪಡೆದವರು ಸಮರ್ಪಕವಾಗಿ ಮಾಡಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು ಇದೀಗ ಮೂರೇ ತಿಂಗಳಲ್ಲಿ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಬಾಗಿಲು ಹಾಕಿದೆ.ಕಳೆದ ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡದ ಕಾರಣ ಕಾರ್ಮಿಕರು ಕೆಲಸ ಮಾಡದೆ ಇದ್ದು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆಗುತ್ತಿಗೆ ದಾರರು ಮತ್ತು...














