Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಭಾರೀ ಮಳೆ ತಾಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿ

ಬೆಳ್ತಂಗಡಿ; ಭಾರೀ ಮಳೆ ತಾಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿ

0
9

ಬೆಳ್ತಂಗಡಿ; ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆ ಗುರುವಾರ ಕೊಂಚ ಕಡಿಮೆಯಾಗಿದ್ದು ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ನೀರಿಮಟ್ಟ ಇಳಿಕೆಯಾಗಲಾರಂಭಿಸಿದೆ.
ತಾಲೂಕಿನ ಸೋಣಂದೂರು ಗ್ರಾಮದ ಕೃಷ್ಣಯ್ಯ ಆಚಾರ್ ಎಂಬವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಕುತ್ಲೂರು ಗ್ರಾಮದ ಸುಲೋಚನಾ ಜೈನ್ ಎಂಬವರ ವಾಸದ ಮನೆ ಕುಸಿದು ಬಿದ್ದಿದೆ ಮನೆಯಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಪಟ್ರಮೆ ಗ್ರಾಮದ ಮಾಯಿಲ ಮೊಗೇರ ಎಂಬವರ ಮನೆ ಮೇಲೆ ಮರ ಮುರಿದು ಬಿದ್ದು ಮನೆಯ ಮೇಲ್ಚಾವಣಿ ಕುಸಿದಿದೆ. ಶಿಶಿಲ ಗ್ರಾಮದ ಕಿನ್ಯಡ್ಕ ದಂಬಲ್ಲಿನ ನಿವಾಸಿ ಜಗದೀಶ್ ಎಂಬವರ ಮನೆಯ ಮೇಲೆ ಮರ ಮುರಿದು ಬಿದ್ದು ಮನೆಗೆ ಹಾನಿಯುಂಟಾಗಿದೆ.

NO COMMENTS

LEAVE A REPLY

Please enter your comment!
Please enter your name here