

ಬೆಳ್ತಂಗಡಿ; ಅಳದಂಗಡಿಯ ಬಡಗಕಾರಂದೂರು ಶಾಲಾ ಬಳಿ ಅಗ್ನಿ ಅವಘಡದಿಂದ ಸ್ಥಳೀಯ ನಿವಾಸಿ ಸಂಶುದ್ದೀನ್ ರವರ ತೋಟಕ್ಕೆ ಹಾನಿಸಂಭವಿಸಿದೆ.
ಏಕಾ ಏಕಿ ಬೆಂಕಿ ಆವರಿಸಿಕೊಂಡಿದ್ದು ತೋಟದಲ್ಲಿನ ಅಡಿಕೆ ಗಿಡಗಳು ಹಾಗೂ ಇತರ ಗಿಡಗಳಿಗೆ ಹಾನಿ ಸಂಭವಿಸಿದ್ದು ಭಾರೀ ನಷ್ಟ ಸಂಭವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಬಕಿ ನಂದಿಸಲಾಗಿದೆ.
ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ;
ಬೆಂಕಿ ಅನಾಹುತಕ್ಕೆ ಒಳಗಾಗಿದ್ದು ಸ್ಥಳಕ್ಕೆ ಬುಧವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹಾಗೂ ಸಂಬಂಧಿತ ಇಲಾಖೆಗಳಿಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದರು. ನಷ್ಟಕ್ಕೊಳಗಾದ ಸಂಶುದ್ದೀನ್ ರವರಿಗೆ ಇಲಾಖಾ ವತಿಯಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆಯಿತ್ತು ದೈರ್ಯ ತುಂಬಿದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು,ತಾಲೂಕು ಕೆಡಿಪಿ ಸದಸ್ಯರಾದ ಸುನಿಲ್ ಕುಮಾರ್ ಜೈನ್,ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಘಟಕದ ಉಪಾಧ್ಯಕ್ಷರಾದ ಪ್ರಜ್ವಲ್ ಜೈನ್ ನಾವರ,ಸ್ಥಳೀಯರಾದ
ರಾಜೇಶ್ ರಾವ್ ದೋರಿಂಜ, ರಾಜು ಶೆಟ್ಟಿ, ಅಶ್ವಥ್ ಆಚಾರ್ಯ, ಸದಾನಂದ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು
