Home ಸ್ಥಳೀಯ ಸಮಾಚಾರ ನಾಗರಿಕ ಸೇವಾ ಟ್ರಸ್ಟ್ ನ‌ ಟ್ರಸ್ಟಿ ದಯಾನಂದ ಪೂಜಾರಿ ನಿಧನ

ನಾಗರಿಕ ಸೇವಾ ಟ್ರಸ್ಟ್ ನ‌ ಟ್ರಸ್ಟಿ ದಯಾನಂದ ಪೂಜಾರಿ ನಿಧನ

0

ಬೆಳ್ತಂಗಡಿ;  ಕರಂಬಾರು ಗ್ರಾಮದ ಕಂಬ್ಲಾಜೆ ನಿವಾಸಿ, ಸಮಾಜಸೇವಕ ದಯಾನಂದ ಪೂಜಾರಿ (69) ಅನಾರೋಗ್ಯದಿಂದ ಸೆ.15ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ ನ ಆಜೀವ ಟ್ರಸ್ಟಿಯಾಗಿ ಹಾಗೂ ಶ್ರೀ ಪಾಂಡುರಂಗ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version