ಬೆಳ್ತಂಗಡಿ: ತಾಜುಲ್ ಉಲಮಾ ಸಯ್ಯಿದ್ ಉಳ್ಳಾಳಂ ತಂಙಳ್ ಅವರ 13 ನೇ ಉರೂಸ್ ಪ್ರಯುಕ್ತ ಎಟ್ಟಿಕ್ಕುಳಂ ದರ್ಸ್ ಫಂಡ್ ಗಾಗಿ ಬೆಳ್ತಂಗಡಿ ತಾಲೂಕಿನ ವಿವಿಧ ಮೊಹಲ್ಲಾಗಳಿಂದ ಅಕ್ಕಿ ವಾಗ್ದಾನ ಮೂಲಕ ಸಂಗ್ರಹಿಸಲಾದ 10 ಲಕ್ಷ ರೂಪಾಯಿ ಯನ್ನು ಸಯ್ಯಿದ್ ಸಾದಾತ್ ತಂಙಳ್ ರವರ ನಾಯಕತ್ವದಲ್ಲಿ ಹಿರಿಯ ಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ನಾಯಕರಾದ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಸಲೀಂ ಕನ್ಯಾಡಿ, ಅಬ್ಬೋನು ಮದ್ದಡ್ಕ, ಉಮರ್ ಜಿ ಕೆರೆ ಮುಂತಾದವರು ಉಪಸ್ಥಿತರಿದ್ದರು.
ಈ ಧನ ಸಂಗ್ರಹ ವೇಳೆ ಸಹಕರಿಸಿದ ಎಲ್ಲಾ ಮೊಹಲ್ಲಾಗಳ ಪ್ರತಿನಿಧಿಗಳಿಗೆ ಹಾಗೂ ಜಮಾಅತ್ ಬಾಂಧವರಿಗೆ ಸಾದಾತ್ ತಂಙಳ್ ಕೃತಜ್ಞತೆ ಸಲ್ಲಿಸಿದರು.
