ಬೆಳ್ತಂಗಡಿ; ಇತ್ತೀಚೆಗೆ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟ (ಡಿ.ವೈ.ಎಫ್.ಐ.) ಬೆಳ್ತಂಗಡಿ ತಾಲೂಕು 10ನೇ ಸಮ್ಮೇಳನವು ನೂತನ ತಾಲೂಕು ಅಧ್ಯಕ್ಷರನ್ನಾಗಿ ಅದಿತಿ ಕೊಯ್ಯೂರು ಪ್ರಧಾನ ಕಾರ್ಯದರ್ಶಿಯನ್ನಾಗಿ ಅಭಿಷೇಕ್ ಪದ್ಮುಂಜ, ಖಜಾಂಜಿಯಾಗಿ ಜಯಂತ ಪಟ್ರಮೆ ಅವರುಗಳು ಮರು ಆಯ್ಕೆ ಆದರು. ನೂತನ ಉಪಾಧ್ಯಕ್ಷರುಗಳಾಗಿ ಅಶ್ವಿತ ಕುತ್ಲೂರು ಮತ್ತು ನಝೀರ್ ಕಕ್ಕಿಂಜೆ ಹಾಗೂ ಸಹಕಾರ್ಯದರ್ಶಿಗಳಾಗಿ ವಿನುಶರಮಣ ಬೋಳೋಡಿ ಮತ್ತು ಇಂತಿಯಾಸ್ ಕಲ್ಲೇರಿ ಅವರುಗಳು ಸರ್ವಾನುಮತದಿಂದ ಆಯ್ಕೆಯಾದರು. ಜೊತೆಗೆ ಭುವನೇಶ್, ವಿಶಾಲ್, ನಿತಿನ್, ರಂಜಿತ್, ರತನ್, ದೀಕ್ಷಿತ್, ಆನಂದ, ಶಿವಪ್ಪ, ರೋಹಿತ್, ಯಶೋಧರ, ತಾಜುದ್ದೀನ್ ಮೊದಲಾದ 11 ಮಂದಿ ತಾಲೂಕು ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದರು.
