
ಬೆಳ್ತಂಗಡಿ : ಧಾರಕಾರ ಮಳೆ ಮತ್ತು ಭೂ ಕುಸಿತ,ಮತ್ತು ಜೋರಾದ ಗಾಳಿ ಬೀಸುತ್ತಿದ್ದು ಪರಿಣಾಮ
ಪ್ರವಾಸಿಗರ ಸುರಕ್ಷತೆ ಸಲುವಾಗಿ ತಾಲೂಕಿನ ಪ್ರಸಿದ್ಧ ಚಾರಣ ಪಥ ನೇತ್ರಾವತಿ ಪೀಕ್ ಹಾಗೂ ಕಡಮಗುಂಡಿ ಜಲಪಾತ ಪ್ರವೇಶಕ್ಕೆ ನಿರ್ಭಂಧ ಹೇರಲಾಗಿತ್ತು. ಇದೀಗ ವನ್ಯಜೀವಿ ವಿಭಾಗ ಮಳೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ನಿರ್ಭಂದ ತೆರವುಗೊಂಳಿಸಿದ್ದು ಜು. 11 ರಿಂದ ಪ್ರವಾಸಿಗರ ವೀಕ್ಷಣೆಗೆ ಈ ಸ್ಥಳ ಮುಕ್ತಗೊಂಡಿರುವುದಾಗಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.










