Home ಅಪಘಾತ ಕೆರೆಕಟ್ಟೆಯಲ್ಲಿ ಕಾಡಾನೆದಾಳಿಗೆ ಇಬ್ಬರು ಬಲಿ

ಕೆರೆಕಟ್ಟೆಯಲ್ಲಿ ಕಾಡಾನೆದಾಳಿಗೆ ಇಬ್ಬರು ಬಲಿ

8
0

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಶೃಂಗೇರಿ ತಾಲೂಕಿನ ಕೆರೆಟ್ಟೆ ಗ್ರಾ.ಪಂ. ಮೂಡುಬ ಗ್ರಾಮದ ಎಲ್ಸಾರ್ ಬಳಿ ಶುಕ್ರವಾರ(ಅ31)ಬೆಳಗಿನ ಜಾವ 7 ಗಂಟೆ ಸುಮಾರಿಗೆ ನಡೆದಿದೆ.

ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟವರು. ಶುಕ್ರವಾರ ಬೆಳಗ್ಗೆ ಕಾಡಿಗೆ ಸೊಪ್ಪು ತರಲು ತೆರಳಿದ್ದ ವೇಳೆ ಕಾಡಾನೆ ಇವರಿಬ್ಬರ ಮೇಲೆ ದಾಳಿ ನಡೆಸಿದೆ ಇಬ್ಬರೂ‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹರೀಶ್ ಶೆಟ್ಟಿ ಅವರಿಗೆ ಪತ್ನಿ ಇಬ್ಬರು ಪುತ್ರಿಯರು ಇದ್ದಾರೆ. ಹಾಗೇ ಉಮೇಶ್ ಗೌಡ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
ಕಾಡಾನೆ ದಾಳಿಗೆ ಕೃಷಿಕರಿಬ್ಬರು ಮೃತ ಪಟ್ಟ ಬಗ್ಗೆ
ಸ್ಥಳೀಯರು ಆಕ್ರೋಶ ಭರಿತರಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಪಟ್ಟು ಹಿಡಿದಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಉಪಟಳ ಅನೇಕ ವರ್ಷಗ ಳಿಂದ ತೀವ್ರವಾಗುತ್ತಿದ್ದು, ಇದುವರೆಗೆ ಹಲವರು ಜೀವ ಕಳೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here