Home ಅಪರಾಧ ಲೋಕ ಬೆಳ್ತಂಗಡಿ; ನಕಲಿ ಚಿನ್ನಾಭರಣ ಅಡಮಾನ ಇರಿಸಿ ಸಾಲಪಡೆದು ವಂಚನೆ: ಪ್ರಕರಣ ದಾಖಲು

ಬೆಳ್ತಂಗಡಿ; ನಕಲಿ ಚಿನ್ನಾಭರಣ ಅಡಮಾನ ಇರಿಸಿ ಸಾಲಪಡೆದು ವಂಚನೆ: ಪ್ರಕರಣ ದಾಖಲು

0


ಬೆಳ್ತಂಗಡಿ:ನಕಲಿ ಚಿನ್ನಾಭರಣ ಅಡಮಾನ ಇರಿಸಿ ಸಾಲ ಪಡೆದು ವಂಚನೆ ನಡೆಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಪ್ರವೀಣ್ ಕ್ಲಿಪರ್ಡ್ ಪಾಯಸ್ ದೂರು ನೀಡಿದ್ದು, ಅಬ್ದುಲ್ ರಮೀಜ್ ಎಂಬಾತನು ಸೆ.9 ಮತ್ತು ಅ.8 ರಂದು ಸಹಕಾರ ಸಂಘಕ್ಕೆ ಬಂದು ಕ್ರಮವಾಗಿ 22.900 ಗ್ರಾಂ. ಮತ್ತು 33.910 ಗ್ರಾಂ. ತೂಕದ ಆಭರಣಗಳನ್ನು ಚಿನ್ನಾಭರಣವೆಂದು ನಂಬಿಸಿ ಅಡಮಾನ ಇಟ್ಟು 1,91,000 ರೂ. ಮತ್ತು 2,84,750 ರೂ ಸಾಲ ಪಡೆದುಕೊಂಡಿರುತ್ತಾನೆ.
ಅ‌‌.14 ರಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿತ ವ್ಯಕ್ತಿ
ಇತರ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಸಾಲ ಪಡೆದು ಮೋಸ ಮಾಡಿರುವ ವಿಚಾರ ತಿಳಿದು ಬಂದಿದೆ. ಶಾಖೆಯಲ್ಲಿ ಆತ ಅಡಮಾನ ಇಟ್ಟ ಚಿನ್ನಾಭರಣವನ್ನು ಮರು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಪ್ರಕರಣ‌ ದಾಖಲಿಸಿಕೊಳ್ಳಲಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version