

ಬೆಳ್ತಂಗಡಿ; ಮಾದಕ ವಸ್ತು ಬಳಸುವ, ಬಳಸಲು ಪ್ರೇರೇಪಿಸುವ,ಸಹಕರಿಸುವ ಕೆಲಸ ಮನುಕುಲಕ್ಕೆ ವಿರುದ್ಧವಾದುದು, ಯುವಜನತೆ ದೇಶದ ಆಸ್ತಿಯಾಗಿದ್ದು ಮಾದಕ ಚಟಕ್ಕೆ ಬಲಿಯಾಗಬಾರದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಎಲ್. ಧರ್ಮ ಹೇಳಿದರು
ಅವರು ಭಾನುವಾರ ವ್ಯಸನ ಮುಕ್ತ ಭಾರತ ಜಾಗೃತಿಗಾಗಿ
ಉಜಿರೆಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಜರಗಿದ ರೈನಾಥನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಕುಲಕ್ಕೆ ಅಪಾಯ ಉಂಟು ಮಾಡುವ ಯಾವುದೇ ಕೆಲಸಕ್ಕೆ ಸಹಕರಿಸುವುದು ಅಸಂವಿಧಾನಿಕ,ರೈನಾಥನಗ ಸ್ಪರ್ಧೆಯಲ್ಲ ಸಮಾಜಕ್ಕೆ ಸಂದೇಶ ನೀಡುವ ಕಾರ್ಯವಾಗಿದೆ. ಸಮಾಜ ಆರೋಗ್ಯ ಪೂರ್ಣ ವಾಗಿದ್ದಾರೆ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು.

ಮಂಗಳೂರು ಸೈಬರ್ ಪೊಲೀಸ್ ಠಾಣೆ ಡಿಎಸ್ಪಿ ಮಂಜುನಾಥ್ ಆರ್.ಜೆ.ಪ್ರತಿಜ್ಞಾ ವಿಧಿ ಬೋಧಿಸಿದರು.
ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್,ಎಸ್ ಡಿ ಎಂ ಕಾಲೇಜ್ ಪ್ರಿನ್ಸಿಪಾಲ್ ಡಾ. ಪಿ.ವಿಶ್ವನಾಥ್,ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಾಪುರ ಮಠ, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಬದುಕು ಕಟ್ಟೋಣ ಬನ್ನಿ ತಂಡದ ಸಂಸ್ಥಾಪಕ ಮೋಹನ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ,ಕಾರ್ಯದರ್ಶಿ ಸಂದೇಶ ರಾವ್, ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ,
ಎಸ್ ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್. ವ್ಯಾಯಮ ಜಿಮ್ ನ ಶಿಶಿರ ರಘುಚಂದ್ರ ಉಪಸ್ಥಿತರಿದ್ದರು.
ವಕೀಲ ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.
ವ್ಯಾಯಾಮ್ ಕ್ರಾಸ್ ಫಿಟ್ನೆಸ್ ಮತ್ತು ಕ್ರಾಸ್ ಫಿಟ್ ಉಜಿರೆ ಇದರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾಶಿ ಪ್ಯಾಲೆಸ್,ದಿ ಓಶಿಯನ್ ಪರ್ಲ್,ಬೆಳ್ತಂಗಡಿ ರೋಟರಿ ಕ್ಲಬ್, ರೋಟರಿ ಇಂದಿರಾ ನಗರ ಬೆಂಗಳೂರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ರಾಜಾರಾಮ್ ಏಜೆನ್ಸೀಸ್,ಎಸ್ ಡಿಎಂಇ ಸೊಸೈಟಿ, ಎಸ್ ಡಿ ಎಂ ಮಲ್ಟಿ
ಸ್ಪೆಷಾಲಿಟಿ ಆಸ್ಪತ್ರೆ, ಸಂಧ್ಯಾ ಫ್ರೆಶ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸಿಇಎನ್ ಪೊಲೀಸ್ ಠಾಣೆ ಮಂಗಳೂರು ಸಹಯೋಗ ನೀಡಿದವು.
