Home ಅಪರಾಧ ಲೋಕ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ, ಬೃಹತ್ ರಕ್ತದಾನ ಶಿಬಿರ; ರಕ್ತಕ್ಕೆ ಜಾತಿ-ಧರ್ಮದ...

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ, ಬೃಹತ್ ರಕ್ತದಾನ ಶಿಬಿರ; ರಕ್ತಕ್ಕೆ ಜಾತಿ-ಧರ್ಮದ ಪರಿಮಿತಿಯಿಲ್ಲ ಗಂಗಾಧರ ಗೌಡ

0

ಬೆಳ್ತಂಗಡಿ: ಉತ್ಸಾಹ, ಉತ್ತಮ ನಾಯಕತ್ವ, ತ್ಯಾಗ ಬಲಿದಾನಕ್ಕೆ ಕೆಂಪೆಗೌಡರ ವ್ಯಕ್ತಿತ್ವ ಆದರ್ಶನೀಯ. ರಾಜಾಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಹೆಸರುವಾಸಿಯಾಗಿದ್ದು ಇದಕ್ಕೆ ಅವರ ಅಂದಿನ ಆಡಳಿತ್ಮಾಕ ಕಾರ್ಯವೈಖರಿಯಿಂದ ದೊಡ್ಡ ನಗರವೊಂದಕ್ಕೆ ಹಾಕಿರುವ ಭದ್ರಬುನಾದಿಯೇ ಸಾಕ್ಷಿ, ಕೆಂಪೇಗೌಡರ ಆಡಳಿತ್ಮಾಕ ವ್ಯವಸ್ಥೆ ಸದಾ ಪ್ರೇರಣದಾಯಿಯಾಗಿದ್ದಾರೆ. ರಕ್ತದಾನ ಎಲ್ಲಾದಾನಗಳಿಗಿಂತ ಶ್ರೇಷ್ಠಯುತ ದಾನವಾಗಿದೆ. ರಕ್ತಕ್ಕೆ ಜಾತಿ, ಮತ, ಧರ್ಮದ ಪರಿಮಿತಿಯಿಲ್ಲ,  ಎಂದು ಮಾಜಿ ಸಚಿವ ಲಾಯಿಲ ಪ್ರಸನ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಗಂಗಾಧರ ಗೌಡ ಹೇಳಿದರು.

ಅವರು ಬೆಳ್ತಂಗಡಿ ಸಂತೆಕಟ್ಟೆ ಮಂಜುನಾಥ ಸ್ವಾಮಿ ಕಲಾಮಂದಿರದ ಬಳಿ ಇರುವ ಬಯಲು ಮಂದಿರದಲ್ಲಿ  ನಡೆದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್, ಒಕ್ಕಲಿಗ ಗೌಡರ ಯುವ ವೇದಿಕೆ, ಒಕ್ಕಲಿಗ ಗೌಡರ ಮಹಿಳಾ ವೇದಿಕೆ ಹಾಗೂ ಮಹಿಳಾ ಯುವ ವೇದಿಕೆ, ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ, ಇವರ ಸಹಯೋಗದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಪ್ರಸನ್ನ ಶಿಕ್ಷಣ ಸಮೂಹ ಸಂಸ್ಥೆಗಳು ಲಾಯಿಲ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಮತ್ತು ಊರ ನಾಗರಿಕರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ, ಸರಕಾರ ಕೆಂಪೆಗೌಡಜಯಂತಿ ಆಚರಣೆ ನಡೆಸುತ್ತಿದ್ದು ಶೌರ್ಯದ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಇಂತಹ ಸಮುದಾಯದಲ್ಲಿ ಹುಟ್ಟಿದ ನಾವು ಧನ್ಯರು. ದೇವಾಲಯ, ಕೆರೆ, ರಸ್ತೆಗಳ ಅಭಿವೃದ್ಧಿಯ ನಾಯಕರಾದ ಕೆಂಪೆಗೌಡರು ಬೆಂಗಳೂರನ್ನು ಕಟ್ಟಿ ಬೆಳೆಸಿದ್ದಾರೆ ಅವರ ವ್ಯಕ್ತಿತ್ವ, ಶಿಸ್ತುಬದ್ಧ ಆಡಳಿತ ನಮಗೆ ಪ್ರೇರಣದಾಯಿ ಎಂದು ಹೇಳಿದರು.

ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ವಸಂತ ಗೌಡ ಮರಕಡ ಮಾತನಾಡಿ, ಗೌಡರು ಎಂದು ಹೇಳಿಕೊಳ್ಳಲು ಕೆಂಪೆಗೌಡರು ಪ್ರೇರಣ ಶಕ್ತಿ, ಮುಂದಿನ ದಿನಗಳಲ್ಲಿ ಬೆಳ್ತಂಗಡಿಗೆ ಗೌಡರೇ ನಾಯಕರು ಎಂಬ ಮಾತು ನಮ್ಮಲ್ಲಿ ಬರಬೇಕೆಂದು ಸಂಕಲ್ಪ ಮಾಡೋಣ ಎಂದರು.

ಒಕ್ಕಲಿಗ ಗೌಡರ ಸಂಘ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಎರಡನೇ ಸ್ಥಾನದಲ್ಲಿದೆ. ಸಮುದಾಯದ ಮೂರು ರತ್ನಗಳಾದ ಕೆಂಪೆಗೌಡರು, ಕುವೆಂಪು ಹಾಗೂ ಕೆಂಗಲ್ ಹನುಮಂತಯ್ಯ ಅವರನ್ನು ರಾಜ್ಯಕ್ಕೆ ನೀಡಿರುವುದು ಸಮಾಜಕ್ಕೆ ಹೆಮ್ಮೆಯ ವಿಚಾರ. ಅವರ ನಾಯಕತ್ವ ಪ್ರೇರಣದಾಯಿ ಆಗಿದ್ದು ಇಂದು ಬೆಂಗಳೂರು ಈ ಹಂತಕ್ಕೆ ಬೆಳೆದು ನಿಲ್ಲಲು ಅವರ ಶ್ರಮ ಅಪಾರವಾಗಿದೆ ಆದ್ದರಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೆಗೌಡರ ಹೆಸರನ್ನು ಇಡಲಾಗಿದೆ. ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಒಕ್ಕಲಿಗ ಗೌಡರ ಸಂಘ ನಿರ್ದೇಶಕ ವಿಜಯ ಗೌಡ ವೇಣೂರು, ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ, ಜಿಲ್ಲಾ ಒಕ್ಕಲಿಗ ಗೌಡರ ಸಂಘ ಜೊತೆ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ , ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಂತ ಗೌಡ ಸಾಯಿಕೃಪಾ ಗುರಿಪಳ್ಳ, ಬೆಳ್ತಂಗಡಿ ತಾಲೂಕು ವಕೀಲ ಸಂಘ ಕಾರ್ಯದರ್ಶಿ ನವೀನ್ ಬಿ.ಕೆ., ಜಿಲ್ಲಾ ಒಕ್ಕಲಿಗ ಗೌಡರ ಟ್ರಸ್ಟ್ ಜೊತೆ ಕೋಶಾಧಿಕಾರಿ ಸೂರಜ್ ವಳಂಬ್ರ, ಒಕ್ಕಲಿಗ ಗೌಡರ ಸಂಘ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ, ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಕಾರ್ಯದರ್ಶಿ ಭರತ್ ಗೌಡ ಹಾನಿಬೆಟ್ಟು , ಮಂಗಳೂರು ಬ್ಲಡ್ ಸೆಂಟರ್, ಕೆಎಂಸಿ, ವೈದ್ಯಕೀಯ ಅಧಿಕಾರಿ ಡಾ| ಸಂತೃಪ್ತ, ಒಕ್ಕಲಿಗ ಗೌಡರ ಮಹಿಳಾ ವೇದಿಕೆ ಅಧ್ಯಕ್ಷ ಅಪರ್ಣ ಶಿವಕಾಂತ ಗೌಡ ಹಾಗೂ ಒಕ್ಕಲಿಗ ಗೌಡರ ಮಹಿಳಾ ಯುವ ವೇದಿಕೆ ಅಧ್ಯಕ್ಷೆ ಅನುಪಮ ಸತೀಶ್ ಮಾಳಿಗೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಸ್ವಾಗತಿಸಿ, ರಾಘವೇಂದ್ರ ಗೌಡ ವಂದಿಸಿ, ನಿತಿನ್ ಸುರಳಿ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version