Home ಅಪರಾಧ ಲೋಕ ಬೆಳ್ತಂಗಡಿ; ದಾರಿ ತಪ್ಪಿ ಬಂದ ಗೇರುಕಟ್ಟೆಗೆ ಬಂದ ಕಾಜೂರಿನ ವೃದ್ದೆಯನ್ನು ಸುರಕ್ಷಿತವಾಗಿ ಮನೆ ಸೇರಿಸಿದ ಅಬ್ದುಲ್...

ಬೆಳ್ತಂಗಡಿ; ದಾರಿ ತಪ್ಪಿ ಬಂದ ಗೇರುಕಟ್ಟೆಗೆ ಬಂದ ಕಾಜೂರಿನ ವೃದ್ದೆಯನ್ನು ಸುರಕ್ಷಿತವಾಗಿ ಮನೆ ಸೇರಿಸಿದ ಅಬ್ದುಲ್ ಕರೀಂ

0

ಬೆಳ್ತಂಗಡಿ; ತಾಲೂಕಿನ ಕಾಜೂರು ಸಮೀಪದ ನಿವಾಸಿ ಸುಮಾರು 85 ವರ್ಷ ಪ್ರಾಯದ ಅಲಿಮಮ್ಮ ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು ಒಬ್ಬರೇ ಕಾಜೂರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರುಗೆ ಹೋಗುವ ಸರಕಾರಿ ಎಕ್ಸ್ ಪ್ರೆಸ್ ಬಸ್ಸಿಗೆ ಹತ್ತಿದರು. ವಯೋವೃದ್ದೆಯ ಮಾತು ಕಂಡಕ್ಟರ್ ಗೆ ಅರ್ಥವಾಗದೇ ಗೇರುಕಟ್ಟೆಯಲ್ಲಿ ಇಳಿಸಿಬಿಟ್ಟರು.
ಈ ವೃದ್ದೆಗೆ ದಿಕ್ಕು ದೋಚದಾಯಿತು.
ಬಸ್ಸಿನಲ್ಲಿ ಪುತ್ತೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಫೋಲಿಸ್ ಆಗಿದ್ದ ಸದ್ರಿ ಮಂಗಳೂರಿನ ಸೈಬರ್ ಕ್ರೈಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಬೆಳಾಲಿನ ಆದಂ ಎಂಬವರು ಗೇರುಕಟ್ಟೆಯ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೆ ಈ ಬಗ್ಗೆ ಮಾಹಿತಿ ತಿಳಿಸಿದರು.
ತಕ್ಷಣ ಪೇಟೆಗೆ ಬಂದು ಹುಡುಕಾಡಿದಾಗ ಬಸ್ಸು ನಿಲ್ದಾಣದಲ್ಲಿ ಒಂಟಿಯಾಗಿ ದಿಕ್ಕು ತಪ್ಪಿ ಭಯ ಗೊಂಡಿದ್ದರು. ವಿಚಾರಿಸಿದಾಗ ಕಾಜೂರು ಕಡೆಯವರೆಂದು ತಿಳಿದು ಬಂತು.ಕಾಜೂರಿನ ದರ್ಗಾ ಶರೀಫ್ ನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ರವರ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದರು.ಅಬ್ದುಲ್ ಕರೀಮ್ ರವರು ಸ್ಥಳೀಯ ಅಟೋ ಚಾಲಕ ಹಿರಿಯರಾದ ಶೇಖುಂಙ ಎಸ್ ಮತ್ತು ಗೂಡಂಗಡಿ ಹಸೈನಾರ್ ಹಾಜಿ ರವರ ಸಹಕಾರದಲ್ಲಿ ಕಾಜೂರಿನ ಮಗಳ ಮನೆಗೆ ಸ್ವತಹ ಅಬ್ದುಲ್ ಕರೀಮ್ ಹೋಗಿ ಈ ವೃದ್ದೆಯನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version