ಬೆಳ್ತಂಗಡಿ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆಕಳ್ಳತನ ಪ್ರಕರಣದಲ್ಲಿ ಸುಮಾರು 16 ವರ್ಷಗಳಿಂದ ಪುತ್ತೂರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ತಮಿಳುನಾಡು ರಾಜ್ಯದ ತಿರುಣವೇಲಿ ತಾಲೂಕಿನ ಅಲಕುಳಂ ಗ್ರಾಮದ ಮಾರ್ಕಲಕುಳಂ ನಿವಾಸಿ ಷಣ್ಮುಗಯ್ಯನ ಮಗ ಮಾಡ ಸ್ವಾಮಿ (48) ಎಂಬಾತನನ್ನು ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್.ಇ.ಪಿ ನೇತೃತ್ವದ ಸಬ್ ಇನ್ಸ್ಪೆಕ್ಟರ್ ಸುತೇಶ್.ಕೆ.ಪಿ ತಂಡದ ಸಿಬ್ಬಂದಿ ಶಿವರಾಮ್ ರೈ ಮತ್ತು ಗಜೇಂದ್ರರವರು ಜೂ.27 ರಂದು ಪುತ್ತೂರು ತಾಲೂಕಿನ ಕೃಷ್ಣ ನಗರ ಎಂಬಲ್ಲಿಂದ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
