Home ಅಪಘಾತ ದಟ್ಟ ಅರಣ್ಯದಲ್ಲಿ ಸಿಲುಕಿದ ಟ್ರಕ್ಕಿಂಗ್ ತಂಡದ ರಕ್ಷಣೆ; ಬಲ್ಲಾಳ ರಾಯನ ದುರ್ಗ ಟ್ರಕ್ಕಿಂಗ್ ಬಂದು ಕಾಡಿನಲ್ಲಿ...

ದಟ್ಟ ಅರಣ್ಯದಲ್ಲಿ ಸಿಲುಕಿದ ಟ್ರಕ್ಕಿಂಗ್ ತಂಡದ ರಕ್ಷಣೆ; ಬಲ್ಲಾಳ ರಾಯನ ದುರ್ಗ ಟ್ರಕ್ಕಿಂಗ್ ಬಂದು ಕಾಡಿನಲ್ಲಿ ಸಿಲುಕಿದ ತಂಡ

19
0

ಬೆಳ್ತಂಗಡಿ: ಚಿತ್ರದುಗದಿಂದ ಬಂದುಬೆಳ್ತಂಗಡಿ ಮೂಲಕ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ತೆರಳಿದ್ದ 10 ತಂಡ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ ಘಡನೆ ಸೋಮವಾರ ನಡೆದಿದ್ದು ತಡರಾತ್ರಿಯ ವೇಳೆ ಹತ್ತು ಮಂದಿಯನ್ನು ಪೊಲೀಸರು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿಸುರಕ್ಷಿತವಾಗಿ ಹೊರತರಲಾಗಿರುವುದಾಗಿ ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಬೆಳ್ತಂಗಡಿ ಗೆ ಬಂದು ಅರಣ್ಯದ ಮೂಲಕ ಟ್ರೆಕ್ಕಿಂಗ್ ಆರಂಭಿಸಿದ ಐವರು ಯುವಕರು ಹಾಗೂ ಐದು ಮಂದಿ ಯುವತಿಯರ ತಂಡ ಚಾರಣಿಗರು ರಾತ್ರಿಯ ವೇಳೆ ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ನಂತರ ಕಾರ್ಯ ಪ್ರವೃತ್ತರಾದ ಚಿಕ್ಕಮಗಳೂರು ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಜೊತೆ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ತಡ ರಾತ್ರಿಯ ವೇಳೆ ಇವರನ್ನು ದಟ್ಟ ಅರಣ್ಯದಲ್ಲಿ ಪತ್ತೆ ಹಚ್ಚವಲ್ಲಿ ಯಶಸ್ವಿಯಾಗಿದ್ದು ಬೆಳಗ್ಗಿನ ಜಾವ ಇವರನ್ನು ಅರಣ್ಯದಿಂದ ಸುರಕ್ಷಿತವಾಗಿ ಹೊರತರಲಾಗಿದೆ.

LEAVE A REPLY

Please enter your comment!
Please enter your name here