Home ಅಪರಾಧ ಲೋಕ ರಸ್ತೆ ಕಳಪೆ ಕಾಮಗಾರಿ ವಿರುದ್ಧ ಟಿ.ಬಿ ಕ್ರಾಸ್ ಜಂಕ್ಷನ್ ನಲ್ಲಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ.

ರಸ್ತೆ ಕಳಪೆ ಕಾಮಗಾರಿ ವಿರುದ್ಧ ಟಿ.ಬಿ ಕ್ರಾಸ್ ಜಂಕ್ಷನ್ ನಲ್ಲಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ.

29
0

ಬೆಳ್ತಂಗಡಿ; ಲಾಯಿಲ ಗ್ರಾಮದ ಟಿ.ಬಿ ಕ್ರಾಸ್-ಕುತ್ರೋಟ್ಟು ರಸ್ತೆ ಕಳಪೆ ಕಾಮಗಾರಿ ವಿರುದ್ಧ ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು. ಉಜಿರೆ ಬ್ಲಾಕ್ ಸಮಿತಿ ಸದಸ್ಯರಾದ ಆರೀಫ್ ಕುಂಟಿನಿ, ರಫೀಕ್ ಕುಂಟಿನಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಲಾಯಿಲ ಗ್ರಾಮ ಪಂಚಾಯತ್ ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ಸಲೀಂ ಕುಂಟಿನಿ ಹಾಗೂ ಇತರ ಮುಖಂಡರು ಇದ್ದರು

ಪ್ರತಿಭಟನಾ ಸ್ಥಳಕ್ಕೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಕ್ಕಪ್ಪ ಎಚ್ ಆಗಮಿಸಿ ಪರಿಶೀಲನೆ ನಡೆಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಗುತ್ತಿಗೆ ದಾರರಿಗೆ ಸೂಚಿಸಿದರು.
ಈ ಸಂದರ್ಸಭದಲ್ಲಿ ಮರ್ಪಕವಾಗಿ ರಸ್ತೆ ಕಾಮಗಾರಿಯನ್ನು ಮಾಡಿಕೊಡುವಂತೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಕ್ಕಪ್ಪ ಎಚ್ (ಬಿ. ಇ) ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಜಿರೆ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಅಲಿ ಉಜಿರೆ, ಫಝಲ್ ಉಜಿರೆ, ಸಹಲ್ ನಿರ್ಸಾಲ್, ಮರ್ಷಾ ಉಜಿರೆ, ಸಲೀಂ ಉಜಿರೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here