Home ರಾಜಕೀಯ ಸಮಾಚಾರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಭಾರತ್ ಜೋಡೋ ಯುವ ಸಂಘದ ಉಸ್ತುವಾರಿಗಳ ನೇಮಕ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಭಾರತ್ ಜೋಡೋ ಯುವ ಸಂಘದ ಉಸ್ತುವಾರಿಗಳ ನೇಮಕ

0
3

ಬೆಳ್ತಂಗಡಿ:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯುವಜನಪರ ಯೋಜನೆಯಾದ ಭಾರತ್ ಜೋಡೋ ಯುವ ಸಂಘ (BJYS)ವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರಿಯವಾಗಿ ಸಂಘಟಿಸುವ ಉದ್ದೇಶದಿಂದ ಕ್ಷೇತ್ರದ ಏಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗಳು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ಕುವೆಟ್ಟು ಜಿಲ್ಲಾ ಪಂಚಾಯತ್‌ಗೆ ಅರವಿಂದ ಜೈನ್, ಕಣಿಯೂರು ಜಿಲ್ಲಾ ಪಂಚಾಯತ್‌ಗೆ ಎನ್.ಹೆಚ್. ಅಬ್ದುಲ್ ರೆಹಮಾನ್, ಅಳದಂಗಡಿ ಜಿಲ್ಲಾ ಪಂಚಾಯತ್‌ಗೆ ಲಿಯೋ ಪೀರೆರಾ, ನಾರಾವಿ ಜಿಲ್ಲಾ ಪಂಚಾಯತ್‌ಗೆ ದೀಪಕ್ ಶೆಟ್ಟಿ, ಲಾಯಿಲ ಜಿಲ್ಲಾ ಪಂಚಾಯತ್‌ಗೆ ಜಗನ್ನಾಥ್ ಪುತ್ರಬೈಲ್, ಉಜಿರೆ ಜಿಲ್ಲಾ ಪಂಚಾಯತ್‌ಗೆ ರಜತ್ ಗೌಡ, ಧರ್ಮಸ್ಥಳ ಜಿಲ್ಲಾ ಪಂಚಾಯತ್‌ಗೆ ಶರತ್ ಕಳೆಂಜ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಅನಿಲ್ ಎ.ಜೆ. ಅವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

ನೇಮಕಗೊಂಡಿರುವ ಉಸ್ತುವಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯುವಜನರನ್ನು ಸಂಘಟಿಸಿ, ಭಾರತ್ ಜೋಡೋ ಯುವ ಸಂಘದ ಚಟುವಟಿಕೆಗಳನ್ನು ಗ್ರಾಮ ಮಟ್ಟದವರೆಗೆ ವಿಸ್ತರಿಸುವುದು ಹಾಗೂ ಸಾಮಾಜಿಕ ಮತ್ತು ಜನಪರ ಕಾರ್ಯಕ್ರಮಗಳಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here