ಬೆಳ್ತಂಗಡಿ; ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಒಂಟಿ ಸಲಗ
ರಸ್ತೆ ಮಧ್ಯೆ ನಿಂತ ಕಾರಣಕ್ಕೆ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತ ಗೊಂಡ ಘಟನೆ ಸೋಮವಾರ ಸಂಭವಿಸಿದೆ.
ರಸ್ತೆಯ ಮಧ್ಯದಲ್ಲಿಯೇ ನಿಂತಿದ್ದ
ಕಾಡಾನೆಯಿಂದಾಗಿ ವಾಹನ ಸವಾರರ ಪರದಾಡುವಂತಾಯಿತು. ಇದರಿಂದಾಗಿ ಕೆಲಹೊತ್ತು ವಾಹನಸಂಚಾರ ಸಂಪೂರ್ಣ ಸ್ಥಗಿತಗೊಂಡು ವಾಹನಗಳು ಎರಡೂ ಕಡೆ
ಸಾಲುಗಟ್ಟಿ ನಿಂತಿದ್ದವು ಬಳಿಕ ಕಾಡಾನೆ ರಸ್ತೆಯ ಬದಿಯ ಅರಣ್ಯಕ್ಕೆ ಹೋಗಿದ್ದು ರಸ್ತೆ ಬದಿಯಲ್ಲಿಯೇ ನಿಂತಿರುವುದಾಗಿ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ




