Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ವಿರುದ್ಧ  ವಂಚನೆ ಪ್ರಕರಣ ದಾಖಲು

ಬೆಳ್ತಂಗಡಿ : ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ವಿರುದ್ಧ  ವಂಚನೆ ಪ್ರಕರಣ ದಾಖಲು

0

ಬೆಳ್ತಂಗಡಿ : ಪಟ್ಟ ಜಾಗದ ಒತ್ತುವರಿ ಕುಮ್ಕಿ ಜಾಮೀನು ಎಂದು ಹೇಳಿ ಅದನ್ನು ದರ್ಖಾಸು ಮಾಡಿಕೊಡುವುದಾಗಿ ಸುಳ್ಳು ಹೇಳಿ ಸರಕಾರಿ ಜಾಮೀನನ್ನು ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಂಗಳೂರು ನಗರದ ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂಟಿಲ (61) ಎಂಬವರು ನೀಡಿದ ದೂರಿನ ಮೇರೆಗೆ ಆ.19 ರಂದು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್(ರಿ) ಅಧ್ಯಕ್ಷ ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ; ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಾಂಕ 04-10-2025 ರಂದು ರಂಜನ್ ರಾವ್ ಎರ್ಡೂರು ಎಂಬವರ ಮಾಲಕತ್ವದ ಸರ್ವೆ ನಂ 85/3ಎ ಜಮೀನಿಗೆ ಸಂಬಧಪಟ್ಟಂತೆ 0.28.50 ಎಕ್ರೆ ಜಮೀನನ್ನು ಕುರಿತು ಸೋಮನಾಥ್ ನಾಯಕ್ ಎಂಬವರ ಮುಂದಾಳತ್ವದಲ್ಲಿ ರಂಜನ್ ರಾವ್ ಎರ್ಡೂರು ರವರಿಗೂ ಹಾಗೂ ಮಂಗಳೂರಿನ ಶಶಿಧರವರಿಗೂ ಕರಾರು ಆಗಿದ್ದು ಮೇಲೆ ತಿಳಿಸಿದ ಜಮೀನಿನೊಟ್ಟಿಗೆ 0.70.25 ಎಕ್ರರೆ ಜಮೀನು ಇದರೊಟ್ಟಿಗೆ ಲಗತ್ತು ಇದ್ದು ಸದ್ಯಕ್ಕೆ ಕುಮ್ಕಿ ಎಂದು ಕಾಣಿಸುತ್ತೇವೆ. ಮುಂದಕ್ಕೆ ಇದನ್ನು ದರ್ಖಾಸ್ತು ಮಾಡಿಸಿಕೊಂಡು ಒಟ್ಟು 0.28.50 ಹಾಗೂ 0.70.25 ಒಟ್ಟು 0.98.75 ಎಕ್ರೆ ಜಮೀನನ್ನು ರಿಜಿಸ್ಟರ್ ದಾಖಲು ಮುಖೇನ ಕ್ರಯವರಿಸಿ ನಿಮ್ಮ ಸ್ವಾಧಿನಕ್ಕೆ ಕೊಡುತ್ತೇನೆಂದು ಹೇಳಿ ಅಪಾಧಿತರು ಒಟ್ಟು 90,00,000 /-ರೂಪಾಯಿಗೆ ಕರಾರು ಮಾಡಿಕೊಂಡಿದ್ದು ಅದರಂತೆ ಸೋಮನಾಥ ನಾಯಕ್, ರಂಜನ್ ರಾವ್ ಯೆರ್ಡೂರು ಹಾಗೂ ಅವರು ಸೂಚಿಸಿದ ಇತರ ಖಾತೆಗಳಿಗೆ ಒಟ್ಟು ರೂ ಒಂದು ಕೋಟಿ ಸಂದಾಯ ಮಾಡಿರುವುದಾಗಿಯೂ
ದಿನಾಂಕ 14-05-2026 ರಂದು 28 ಸೆಂಟ್ಸ್ ಕೃಷಿ ಭೂಮಿಯನ್ನು ದಸ್ತಾವೇಜು ನಂಬ್ರ 693/2026-27 ರಂತೆ ಆಪಾದಿತರು ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.
0.70.25 ಜಾಗವನ್ನು ದರ್ಖಾಸ್ತು ಮಾಡುವುದು ಕಷ್ಟಸಾಧ್ಯವೆಂದು ತಿಳಿದಿದ್ದರೂ ಕೂಡ ತನ್ನ ಅತಿಕ್ರಮಿಸಿರುವ ಸರಕಾರಿ ಜಮೀನನ್ನು ಸೇರಿಸಿ ಒಟ್ಟು 0.98.75 ಎಕ್ರೆ ಜಾಗವನ್ನು ಕೊಡುವುದಾಗಿ ಶಶಿಧರ ಅವರಿಗೆ 90 ಲಕ್ಷಕ್ಕೆ ಕರಾರು ಮಾಡಿಕೊಂಡಿದ್ದರೂ ಕೂಡ 1,00,61,250/- ರೂ ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ದೂರಿನಲ್ಲಿ ಆರೋಪಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version