Home ಸ್ಥಳೀಯ ಸಮಾಚಾರ ಪಾಣಕ್ಕಾಡ್ ಅಬ್ದುನ್ನಾಸರ್ ಹಯ್ಯ್ ತಂಙಳ್ ಬಾಅಲವಿ ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿಯ ಖಾಲಿಯಾರ್ ಆಗಿ ಆಯ್ಕೆ

ಪಾಣಕ್ಕಾಡ್ ಅಬ್ದುನ್ನಾಸರ್ ಹಯ್ಯ್ ತಂಙಳ್ ಬಾಅಲವಿ ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿಯ ಖಾಲಿಯಾರ್ ಆಗಿ ಆಯ್ಕೆ

0

ಬೆಳ್ತಂಗಡಿ: ಖಿಳರ್ ಜುಮ್ಮಾ ಮಸೀದಿ (ಕೇಂದ್ರ ಮಸೀದಿ), ಬೆಳ್ತಂಗಡಿ ಇದರ ಜಮಾತ್ ಸಮಿತಿಯ ಸಭೆಯು ದಿನಾಂಕ 24/07/2026ರ ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಜಮಾತ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಸೀದಿಯ ಧಾರ್ಮಿಕ ಹಾಗೂ ಜಮಾತ್ ಸಂಬಂಧಿತ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ, ಖಿಳರ್ ಜುಮ್ಮಾ ಮಸೀದಿಯ ಹಿಂದಿನ ಖಾಲಿಯಾರ್ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮರಣದ ನಂತರ ಖಾಲಿಯಾಗಿದ್ದ ಸ್ಥಾನಕ್ಕೆ ಖಾಲಿಯಾರ್ ಆಗಿ ಪಾಣಕ್ಕಾಡ್ ಅಬ್ದುನ್ನಾಸರ್ ಹಯ್ಯ್ ತಂಙಳ್ ಬಾಅಲವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

ಧಾರ್ಮಿಕ ಸೇವೆ ಹಾಗೂ ಜಮಾತಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಂಙಳ್ ಅವರ ನೇಮಕವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿದ್ದು, ಅವರ ನೇತೃತ್ವದಲ್ಲಿ ಜಮಾತಿನ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಗೌರವ ಅಧ್ಯಕ್ಷರಾದ ಬಿ.ಎಚ್. ಮಹಮ್ಮದ್, ಜಮಾತ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ರಝಕ್ ಬಿ. ಎಚ್, ಕೋಶಾಧಿಕಾರಿ ಫೈಝಲ್ ಐ.ಜೆ., ಉಪಾಧ್ಯಕ್ಷರಾದ ಶೇಖುಂಞ, ಕಾರ್ಯದರ್ಶಿಗಳಾದ ಹನೀಫ್ ವರ್ಷಾ ಹಾಗೂ ಮಹಮ್ಮದ್ ಕುದ್ರಡ್ಕ, ಬಿ.ಎ ನಝಿರ್, ಉಮರ್ ಶಾಫಿ, ಹಾರಿಸ್ ಐ.ಜೆ, ಹೈದರ್ ಬಿ.ಕೆ, ಕಾದರ್ ಟೈಲರ್, ಇಬ್ರಾಹಿಂ ಕೋಡಿ ಸಭೆ,ರಿಝ್ವಾನ್ ಬಿ.ಕೆ. ಅಬ್ದುಲ್ ರಹಮಾನ್, ಇಕ್ಬಾಲ್, ಇಸ್ಮಾಯಿಲ್ ಸಂಜಯನಗರ, ಜಮಾತ್ ಕಮಿಟಿ ಸದಸ್ಯರು ಹಾಗೂ ಜಮಾತಿಗರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version