Home ಸ್ಥಳೀಯ ಸಮಾಚಾರ ಡಿ‌.6 ಬಾರ್ಯ, ತೆಕ್ಕಾರು,ಇಳಂತಿಲ, ಬಂದಾರಿನಲ್ಲಿ ಜನಸ್ಪಂದನ ಸಭೆ

ಡಿ‌.6 ಬಾರ್ಯ, ತೆಕ್ಕಾರು,ಇಳಂತಿಲ, ಬಂದಾರಿನಲ್ಲಿ ಜನಸ್ಪಂದನ ಸಭೆ

0

ಬೆಳ್ತಂಗಡಿ; ಶಾಸಕರಾದ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಗ್ರಾಮ ಮಟ್ಟದಲ್ಲಿ ನಡೆಸುವ ಜನ ಸ್ಪಂದನ ಸಭೆಯನ್ನು ಡಿ.6 ಶನಿವಾರ ದಂದು ನಾಲ್ಕು ಗ್ರಾಮ ಪಂಚಾಯತುಗಳಲ್ಲಿ ನಡೆಯಲಿದೆ. ಜನರ ಬಳಿಗೆ-ತಾಲೂಕು ಆಡಳಿತ ಎಂಬ ಕಲ್ಪನೆಯೊಂದಿಗೆ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಡಿ 6ರಂದು ಪೂರ್ವಾಹ್ನ – 9.30ಕ್ಕೆ ಗ್ರಾಮ ಪಂಚಾಯತ್ ಬಾರ್ಯ ದಲ್ಲಿ
ಪೂರ್ವಾಹ್ನ – 11.00ಕ್ಕೆ ಗ್ರಾಮ ಪಂಚಾಯತ್ ತೆಕ್ಕಾರಿನಲ್ಲಿ ಅಪರಾಹ್ನ 2 ಗಂಟೆಗೆ ಗ್ರಾಮ ಪಂಚಾಯತ್ ಇಳಂತಿಲ ದಲ್ಲಿ ಹಾಗು
ಸಂಜೆ 4 ಕ್ಕೆ ಗ್ರಾಮ ಪಂಚಾಯತ್ ಬಂದಾರಿನಲ್ಲಿ ಜನಸ್ಪಂದನ ಸಭೆ ನಡೆಯಲಿದ್ದು ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕರ ಕಚೇರಿಯ ಪ್ರಕಟನೆ ತಿಳಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version