ಬೆಳ್ತಂಗಡಿ; ಶಾಸಕರಾದ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾ ಅಧಿಕಾರಿಗಳ ಭಾಗವಹಿಸು ವಿಕೆಯಲ್ಲಿ ಜನಸ್ಪಂದನಾ ಸಭೆ ಕಾರ್ಯಕ್ರಮ ನ.29 ಶನಿವಾರ ದಂದು ನೆರಿಯ, ಪುದುವೆಟ್ಟು, ಮುಂಡಾಜೆ, ಹಾಗೂ ಕಲ್ಮಂಜ ಗ್ರಾಮಗಳಲ್ಲಿ ನಡೆಯಲಿದೆ.
ಪೂರ್ವಾಹ್ನ – 9.30 ಕ್ಕೆ ಗ್ರಾಮ ಪಂಚಾಯತ್ ನೆರಿಯ ದಲ್ಲಿ ಸಭೆ ನಡೆಯಲಿದ್ದು
ಪೂರ್ವಾಹ್ನ – 11 ಗಂಟೆಗೆ ಗ್ರಾಮ ಪಂಚಾಯತ್ ಪುದುವೆಟ್ಟಿನಲ್ಲಿ ಸಭೆ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ಗ್ರಾಮ ಪಂಚಾಯತ್ ಮುಂಡಾಜೆಯಲ್ಲಿ ಹಾಗೂ
ಸಂಜೆ – 4 ಗಂಟೆಗೆ ಗ್ರಾಮ ಪಂಚಾಯತ್ ಕಲ್ಮಂಜ ದಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೂ ಭಾಗವಹಿಸಲಿದ್ದು ಸಂಬಂಧಪಟ್ಟ ಗ್ರಾಮಸ್ಥರು ಜನಸ್ಪಂದನ ಸಭೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ.








