ಉಜಿರೆ : ಉಜಿರೆ ಅನುಗ್ರಹ ನಿವಾಸಿ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ, ವಿಜಯ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಉಪಾಧ್ಯಕ್ಷ, ಓಡಲ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ಸ್ಥಾಪಕ ಅಧ್ಯಕ್ಷ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಲಯನ್ ಎಂ. ಜಿ. ಶೆಟ್ಟಿ ( ಎಂ.ಗೋಪಾಲಕೃಷ್ಣ ಶೆಟ್ಟಿ) (86 ವ ) ಅ. 29 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ರುಕ್ಮಿಣಿ ಜಿ. ಶೆಟ್ಟಿ, ಪುತ್ರ ಚಿತ್ರೀಶ್ ಶೆಟ್ಟಿ, ಇಬ್ಬರು ಪುತ್ರಿಯರಾದ ವೃಂದ ಹರಿಪ್ರಕಾಶ್ ಶೆಟ್ಟಿ, ಪ್ರಿಯಾ ಜೆ.ಇವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಉಜಿರೆ ಅವರ ಮನೆಯಲ್ಲಿ ಅ. 30 ರಂದು ಬೆಳಿಗ್ಗೆ ನಡೆಯಲಿದೆ
