Home ಸ್ಥಳೀಯ ಸಮಾಚಾರ ಬಂಧನ ನಾಪತ್ತೆ ವದಂತಿಗಳ ನಡುವೆ ಠಾಣೆ ಹಾಗೂ ಎಸ್.ಐ.ಟಿ‌ ಕಚೇರಿಗೆ ಬಂದು ಹಿಂತಿರುಗಿದ ಮಹೇಶ್ ಶೆಟ್ಟಿ...

ಬಂಧನ ನಾಪತ್ತೆ ವದಂತಿಗಳ ನಡುವೆ ಠಾಣೆ ಹಾಗೂ ಎಸ್.ಐ.ಟಿ‌ ಕಚೇರಿಗೆ ಬಂದು ಹಿಂತಿರುಗಿದ ಮಹೇಶ್ ಶೆಟ್ಟಿ ತಿಮರೋಡಿ

0

ಬೆಳ್ತಂಗಡಿ; ಮಹೇಶ್ ಶೆಟ್ಟಿ ಅವರನ್ನು ಎಸ್.ಐ.ಟಿ ತಂಡ ಬಂಧಿಸಲಿದೆ ಅವರು ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳ ನಡುವೆಯೇ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದ ಮಹೇಶ್ ಶೆಟ್ಟಿ ಅವರು ಎಸ್.ಐ.ಟಿ ಠಾಣೆಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹಿಂತಿರುಗಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬ್ರಹ್ಮಾವರ ಪೊಲೀಸರ ದೂರಿನಂತದ ದಾಖಲಾಗಿದ್ದ ಕರ್ತವ್ಯಕ್ಕೆ ಅಡ್ಡಿ ಪ್ರಕರಣದ ಬಗ್ಗೆ ವಿಚಾರಣೆಗಾಗಿ ಮಹೇಶ್ ಶೆಟ್ಟಿ ಅವರು ಶುಕ್ರವಾರ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದರು. ಠಾಣೆಯಲ್ಲಿ ಹೇಳಿಕೆ ನೀಡಿದ ಬಳಿಕ ಅವರು ನೇರವಾಗಿ ಎಸ್.ಐ.ಟಿ ಕಚೇರಿಗೆ ತೆರಳಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ಅವರಿಗೆ ಯಾವುದೇ ನೋಟೀಸ್ ನೀಡಿದ್ದರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಿಲ್ಲ.
ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಇಂದು ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದರು. ಕಚೇರಿಗೆ ತೆರಳಿದ ಮಹೇಶ್ ಶೆಟ್ಟಿ ಅವರು ಸುಮಾರು  ಒಂದು ಗಂಟೆಯ ಬಳಿಕ ಕಚೇರಿಯಿಂದ ಹಿಂತಿರುಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version