ಬೆಳ್ತಂಗಡಿ; ನೇತ್ರಾವತಿ ಸ್ನಾನಘಟ್ಟ ದಲ್ಲಿ ನಡೆಯುತ್ತಿರುವ ಮೃತದೇಹಗಳಿಗಾಗಿನ ಹುಟುಕಾಟ ಕಾರ್ಯದಲ್ಲಿ ಹೊಸ ಬೆಳವಣಿಗೆ ನಡೆದಿದ್ದು ಸಾಕ್ಷಿ ದೂರು ದಾರ ಇಂದು ಹೊಸ ಸ್ಥಳಕ್ಕೆ ತಂಡವನ್ನು ಕರೆದೊಯ್ದಿದ್ದು ಅಲ್ಲಿ ಕಳೇಬರವೊಂದರ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿದೆ.
ಈ ಬಗ್ಗೆ ಯಾವುದೆ ಸ್ಪಷ್ಟನೆಯನ್ನು ನೀಡಲು ಅಧಿಕಾರಿಗಳು ಇನ್ನೂ ಮುಂದಾಗಿಲ್ಲ
ಆತ ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ ಇಂದು ಹೊಸ ಸ್ಥಳದಲ್ಲಿ ಹುಡುಕಾಟ ನಡೆಸುವ ವೇಳೆ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿದೆ ಆದರೆ ಅರಣ್ಯದ ಒಳಗೆ 11.30ಕ್ಕೆ ಅರಣ್ಯಕ್ಕೆ ತೆರಳಿದ
ತಂಡ ಅರಣ್ಯದಿಂದ ಇನ್ನೂ ಹೊರಬಂದಿಲ್ಲ
ಅರಣ್ಯದ ಒಳಭಾಗಕ್ಕೆ ನಾಲ್ವರು ಸಶಸ್ತ್ರ ತಂಡ್ ಸದಸ್ಯರು ತೆರಳಿದ್ದಾರೆ. ಇದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ ಅದೇ ರೀತಿ ಎರಡು ಮೂಟೆ ಉಪ್ಪನ್ನು ಕೊಂಡೊಯ್ದಿದ್ದಾರೆ. ಸ್ಪಷ್ಟ ಮಾಹಿತಿಗಳು ಇನ್ನೂ ತಿಳಿದು ಬರುತ್ತಿಲ್ಲ.
