
ಬೆಳ್ತಂಗಡಿ; ಧರ್ಮಸ್ಥಳದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಅಶ್ವಮೇಧ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದ ಘಟನೆ ಜು.18 ರಂದು ನಡೆದಿದೆ.
ಕೊಕ್ಕಡ ಸಮೀಪದ ಕೌಕ್ರಡಿ ಬಳಿ ಈ ಘಟನೆ ಸಂಭವಿಸಿದ್ದು ಬಸ್ ನ ಎಡಭಾಗದಲ್ಲಿದ್ದ ವಿದ್ಯುತ್ ಕಂಬ ಬಸ್ ಮೇಲೆ ಬಿದ್ದು ಅದನ್ನು ತಪ್ಪಿಸಲು ಹೋಗಿ ಬಲ ಭಾಗದಲ್ಲಿದ್ದ ಕಂಬವು ಬಸ್ ಮೇಲೆ ಮುರಿದು ಬಿದ್ದಿದೆ. ತಂತಿಗಳು ತುಂಡರಿಸಿ ಬಿದ್ದಿದ್ದು, ವಿದ್ಯುತ್ ಸರಬರಾಜು ಇಲ್ಲದ ಪರಿಣಾಮ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ.
ಬಸ್ ನ ಗಾಜುಗಳು ಹುಡಿಯಾಗಿದೆ ಎಂದು ಧರ್ಮಸ್ಥಳ ಡಿಫೋ ಅಧಿಕಾರಿ ತಿಳಿಸಿದ್ದಾರೆ.