Home ಅಪರಾಧ ಲೋಕ ಚಾರ್ಮಾಡಿ; ಟಿಪ್ಪರ್ ‌ಬಾಡಿಗೆ ವಿಚಾರ ಹೊಡೆದಾಟ; ಧರ್ಮಸ್ಥಳ ಠಾಣೆಯಲ್ಲಿ ಮತ್ತೊಂದು ಪ್ರಕರಣ‌ ದಾಖಲು

ಚಾರ್ಮಾಡಿ; ಟಿಪ್ಪರ್ ‌ಬಾಡಿಗೆ ವಿಚಾರ ಹೊಡೆದಾಟ; ಧರ್ಮಸ್ಥಳ ಠಾಣೆಯಲ್ಲಿ ಮತ್ತೊಂದು ಪ್ರಕರಣ‌ ದಾಖಲು

0

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಟಿಪ್ಪರ್ ಬಾಡಿಗೆ ವಿಚಾರವಾಗಿ ನಡೆದ ಹೊಡೆದಾಟ ಪ್ರಕರಣದಲ್ಲಿ ಇದೀಗ ಧರ್ಮಸ್ಥಳ ಠಾಣೆಯಲ್ಲಿ ತೌಸೀಫ್ ಮತ್ತು ಮುನೀರ್ ಎಂಬವರ ವಿರುದ್ದ ಮತ್ತೊಂದು ಪ್ರಕರಣ ದಾಖಲಾಗಿದೆ.
ಟಿಪ್ಪರ್ ಚಾಲಕ ರಹಿಮಾನ್ ನೀಡಿರುವ ದೂರಿನಲ್ಲಿ ಚಾರ್ಮಾಡಿ ಬೀಟಿಗೆಯ ಅಂಗಡಿಯಲ್ಲಿ ನಿಂತಿದ್ದ ವೇಳೆ ತನ್ನ ಮೇಲೆ ಫಯಾಜ್ ಮೇಲೆ ಮುನೀರ್ ಹಾಗೂ ತೌಸೀಫ್ ಕಬ್ಬಿಣದ ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು ಅದರಂತೆ ಧರ್ಮಸ್ಥಳ ಠಾಣೆಯಲ್ಲಿ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ತೌಸೀಫ್ ನೀಡಿದ ದೂರಿನಂತೆ ರಹೀಂ ಮತ್ತು ಮಹಮ್ಮದ್ ಫಯಾಜ್ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version