Home ರಾಜಕೀಯ ಸಮಾಚಾರ ಹೋರಾಟ ನಿರತ ರೈತರ ಮತ್ತು ರೈತ ಮುಖಂಡರ ಬಂಧನ ಖಂಡನೀಯ – ಬಿ.ಎಂ.ಭಟ್

ಹೋರಾಟ ನಿರತ ರೈತರ ಮತ್ತು ರೈತ ಮುಖಂಡರ ಬಂಧನ ಖಂಡನೀಯ – ಬಿ.ಎಂ.ಭಟ್

3
0


ಬೆಳ್ತಂಗಡಿ; ರೈತರು ದೇಶದ ಅತಿ ದೊಡ್ಡ ಆಸ್ತಿ. ಆದರೆ ಅನ್ನ ನೀಡುವ ಈ ರೈತರ ಪ್ರತಿಭಟನೆಯನ್ನೇ ಸಹಿಸದ ಸರಕಾರ ರೈತ ವಿರೋದಿ, ಜನವಿರೋದಿ ಸರಕಾರವಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಅವರು ಹೇಳಿದ್ದಾರೆ
ದೇವನಹಳ್ಳಿ ಚಲೋ ನಿರತ ರೈತರನ್ನು ಬಂಧನವನ್ನು ಖಂಡಿಸಿ ಸರಕಾರಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಮನವಿ ನೀಡಿದ ಬಳಿಕ ಅವರು ಮಾತನಾಡಿದರು . ಕೈಗಾರಿಕಾ ಪ್ರದೇಶಾಭಿವೃದ್ದಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯ ಪಟ್ಟಣಸದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾದೀನಪಡಿಸುವುದರ ವಿರುದ್ದ ನಡೆಯುತ್ತಿರುವ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರಕಾರವು ರೈತ, ಕಾರ್ಮಿಕ, ದಲಿತ ನಾಯಕರನ್ನು ಬಂದಿಸಿರುವುದು ಮತ್ತು ಕೇಸ್ ದಾಖಲಿಸಿರುವುದು ಖಂಡನೀಯ ಎಂದರು. ತಮ್ಮ ಭೂಮಿಯನ್ನು ಉಳಿಸಿಕೊಡಿ ಎಂದು ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಈ ರೀತಿ ಪೋಲೀಸ್ ಮೂಲಕ ನಡೆಸಿದ ದೌರ್ಜನ್ಯ ನಡೆಸಿರುವುದು ಹೇಯ ಕೃತ್ಯವಾಗಿದೆ ಎಂದ ಅವರು ರೈತರ ಭೂಮಿಯನ್ನೇ ಕಬಳಿಸಲು ನಿರ್ಧರಿಸಿದ ಸರಕಾರದ ತೀರ್ಮಾನವನ್ನು ವಿರೋದಿಸಿದರು. ತಮ್ಮ ತಮ್ಮ ಭೂಮಿಯ ಉಳಿವಿಗಾಗಿ ಶಾಂತಿಯುತವಾಗಿ ನಡೆಸುತ್ತಿದ್ದ ಹೋರಾಟ ನಿರತ ರೈತರನ್ನು ಬಂಧಿಸಿರುವುದು ರೈತರ ಸಂವಿಧಾನ ಬದ್ದ ಹಕ್ಕಿಗೆ ಚ್ಯುತಿ ಉಂಟು ಮಾಡಿದ್ದಾಗಿದೆ.
ಸರಕಾರದ ಈ ನಡೆಯನ್ನು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಪ್ರಬಲವಾಗಿ ಖಂಡಿಸುತ್ತದೆ. ಮತ್ತು ಬಂದಿಸಲ್ಪಟ್ಟ ರೈತರ, ದಲಿತರ, ಮುಖಂಡರುಗಳ ಬಿಡುಗಡೆಗೆ, ಕೇಸ್ ವಜಾಗೋಳಿಸಲು ಒತ್ತಾಯಿಸುತ್ತದೆ ಮಾತ್ರವಲ್ಲ ರೈತರ ಒಪ್ಪಿಗೆ ಇಲ್ಲದೆ ಬಲವಂತವಾಗಿ ರೈತರ ಜಮೀನನ್ನು ಸ್ವಾದೀನಪಡಿಸಬಾರದು ಮತ್ತು ರೈತರ ರಕ್ಷಣೆಗೆ ಸರಕಾರ ಮುಂದಾಗಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದರು. ಮನವಿ ನೀಡುವ ಸಂದರ್ಬ ಪುಷ್ಪಾ, ಅಭಿಷೇಕ್, ಅಶ್ವಿತ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here