Home ಸ್ಥಳೀಯ ಸಮಾಚಾರ ಮಚ್ಚಿನ; ಪಾಲಡ್ಕ  ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

ಮಚ್ಚಿನ; ಪಾಲಡ್ಕ  ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

15
0

ಮಚ್ಚಿನ :ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಝರ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಇದರ ಸಿ ಎಸ್ ಆರ್ ಆಕ್ಟಿವಿಟಿ 2024- 25 ರ ಮಂಗಳ ಅಕ್ಷರ ಮಿತ್ರ ಅಂಗನವಾಡಿ ನಿರ್ಮಾಣ ಯೋಜನೆ ಅಡಿಯಲ್ಲಿ 29ಲಕ್ಷ ಅನುದಾನದಲ್ಲಿ ಮಚ್ಚಿನ ಗ್ರಾಮದ ಪಾಲಡ್ಕ ಇಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕೇಂದ್ರದ ಲೋಕಾರ್ಪಣಾ ಕಾರ್ಯಕ್ರಮ ಜೂ 22 ರಂದು ನೆರವೇರಿತು.
ಎಂಸಿಎಫ್ ನ ಮುಖ್ಯ ಉತ್ಪಾದನಾಧಿಕಾರಿ  ಎಸ್. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರಾದ  ಹರೀಶ್ ಪೂಂಜಾ ಇವರು ನೂತನ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆಗೈದು ಶುಭ ಹಾರೈಸಿದರು. ಆಟದ ಮೈದಾನದ ಉದ್ಘಾಟನೆಯನ್ನು ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿಯವರು ನೆರವೇರಿಸಿದರು. ಸಭಾ ಕಾರ್ಯಕ್ರಮವನ್ನು ಡಾಕ್ಟರ್ ಹರ್ಷ ಸಂಪಿಗೆತ್ತಾಯ ಅನುವಂಶಿಯ ಆಡಳಿತ ಮುಕ್ತ ಹೆಸರು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಬಲ ವರ್ಧನೆಗೆ ಶ್ರಮಿಸುತ್ತಿರುವ ಎಂ.ಸಿ.ಎಫ್ ನ ಕಾರ್ಯಗಳನ್ನು ಶ್ಲಾಘಿಸಿದರು. . ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಸೋಮಾವತಿ ಸದಸ್ಯರುಗಳಾದ ಚೇತನ್ ಪಲ್ಲತಲ, ಶ್ರೀಮತಿ ತಾರಾ, ಶ್ರೀಮತಿ ಡೀಕಮ್ಮ,ಎಂಸಿಎಫ್ ನ ಅಧಿಕಾರಿಗಳಾದ ಚೇತನ್ ಮೆಂಡೋನ್ಸ, ಡಾ.ಯೋಗಿಶ್, ದೀಕ್ಷಿತ್ ಶೆಟ್ಟಿ, ವಿವೇಕ್ ಕೋಟ್ಯಾನ್, ದಿವಾಕರ್ ಶೆಟ್ಟಿ ಕಂಗೆತ್ತಿಲು ಮನೆ ಎಸ್ಡಿಎಂಸಿ ಅಧ್ಯಕ್ಷರು ಕೆಪಿಎಸ್ಸಿ ಪುಂಜಾಲಕಟ್ಟೆ , ಶ್ರೀ ವಸಂತ ಮರಕಡ ಅಧ್ಯಕ್ಷರು ವಕೀಲರ ಸಂಘ ಬೆಳ್ತಂಗಡಿ,ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಚ್ಚಿನ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀ ಚಂದ್ರಕಾಂತ ನಿಡ್ಡಾಜೆಯವರು ಸ್ವಾಗತಿಸಿ ,ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ವೇದಾವತಿ ಧನ್ಯವಾದಗೈದರು. ಪುಷ್ಪಾವತಿಯವರು ಮತ್ತು ಚೇತನ್ ಕಾರ್ಯಕ್ರಮ ನಿರ್ವಹಿಸಿದರು. ಈ ಒಂದು ಸುಂದರ ಕಾರ್ಯಕ್ರಮದಲ್ಲಿ ಎಂ ಸಿ ಎಫ್ ಸಂಸ್ಥೆಯಿಂದ ಅನುದಾನ ಒದಗಿಸಿಕೊಟ್ಟ ಶ್ರೀ ಗಿರೀಶ್ ಮುಖ್ಯ ಉತ್ಪಾದನಾಧಿಕಾರಿ ಯವರನ್ನು ಸನ್ಮಾನಿಸಲಾಯಿತು.ಮಚ್ಚಿನ ಗ್ರಾಮಕ್ಕೆ ಸುಮಾರು 22. ಕೋಟಿಯಷ್ಟು ಅನುದಾನ ಒದಗಿಸಿಕೊಟ್ಟು ಮಚ್ಚಿನ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾದ ಶ್ರೀಯುತ ಹರೀಶ್ ಪೂಂಜ ಮಾನ್ಯ ಶಾಸಕರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಇವರನ್ನು ಸನ್ಮಾನಿಸಲಾಯಿತು.

ಅಂಗನವಾಡಿಯಲ್ಲಿ ಸುಮಾರು 26 ವರ್ಷಗಳ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಶಾರದಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಅನುದಾನ ಒದಗಿಸುವಲ್ಲಿ ಸಹಕರಿಸಿದ ಎಂಸಿಎಫ್ ನ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೂತನ ಅಂಗನವಾಡಿ ಕೇಂದ್ರವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿಕೊಟ್ಟ ಗುತ್ತಿಗೆದಾರರಾದ ಶ್ರೀ ದಯಾನಂದ್ ಮಂಗಳೂರು ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು, ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಸೀಮ್ ಮ್ಯಾಕ್ಸಿಮ್ ಕ್ರಾಸ್ತಾ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಸಿ.ಎಫ್ ನಿಂದ
ಅಂಗನವಾಡಿ ಕಟ್ಟಡಕ್ಕೆ ಅನುದಾನ ಬರುವಲ್ಲಿ ಶ್ರಮಿಸಿದ ಶ್ರೀ ಚಂದ್ರಕಾಂತ್ ನಿಡ್ಡಾಜೆಯವರ ಪ್ರಯತ್ನ ವನ್ನು ಸ್ಮರಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here