



ಬೆಳ್ತಂಗಡಿ; ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ “ಸುಹಾಸ್ ಶೆಟ್ಟಿ ನುಡಿ ನಮನ” ಕಾರ್ಯಕ್ರಮದಲ್ಲಿ ಕುವೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯವರು ಮುಸ್ಲಿಂ ಆಟೋ ಚಾಲಕರ ಬಗ್ಗೆ ಹಿಂದೂ ಮುಸ್ಲಿಂ ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂರುವ ರೀತಿಯಲ್ಲಿ ಮಾತನಾಡಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ಸೋಶಿಯಲ್ ಟ್ರೇಡ್ ಯೂನಿಯನ್ ಗುರುವಾಯನಕೆರೆ ಇದರ ಅಧ್ಯಕ್ಷರಾದ ಅಬ್ದುಲ್ ರಹಮಾನ್ ರವರು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದೂರಿನ ನಲ್ಲಿ, ದಿನಾಂಕ: 11-05-2025 ರಂದು ಗುರುವಾಯನಕೆರೆ ಬಂಟರ ಭವನ ಎಂಬಲ್ಲಿ “ಸುಹಾಸ್ ಶೆಟ್ಟಿಗೆ ನುಡಿನಮನ” ಎಂಬ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಭಾರತಿ ಶೆಟ್ಟಿ ಎಂಬವರು ಭಾಷಣ ಮಾಡುತ್ತಾ “ಗುರುವಾಯನಕೆರೆಯಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ, ಮುಸ್ಲಿಮರಲ್ಲಿ ವ್ಯಾಪಾರ ಮಾಡಬಾರದು, ಮುಸ್ಲಿಂ ವ್ಯಕ್ತಿಗಳ ಆಟೋ ರಿಕ್ಷಾವನ್ನು ಉಪಯೋಗಿಸಾರದು. ಮುಸ್ಲಿಮರ ಜೊತೆಗಿನ ವ್ಯಾಪಾರ-ವ್ಯವಹಾರವನ್ನು ಬಹಿಷ್ಕರಿಸುವಂತೆ ಬಹಿರಂಗವಾಗಿ ಕರೆಯನ್ನು ನೀಡುತ್ತಾ, ಕೋಮು-ಸೌರ್ಹಾಧವನ್ನು ಕೆಡಿಸುವಂತಹ ಭಾಷಣವನ್ನು ಮಾಡಿರುತ್ತಾರೆ. ಅದೂ ಅಲ್ಲದೇ ಗುರುವಾಯನಕೆರೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾದಲ್ಲಿ ಕಷ್ಟಪಟ್ಟು ದುಡಿಯುವಂತಹ ಮುಸ್ಲಿಂ ಆಟೋ ಚಾಲಕರ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಾ, ಹಿಂದುಗಳು ಮುಸ್ಲಿಮರ ಆಟೋಗಳನ್ನು ಉಪಯೋಗಿಸದಂತೆ ಕರೆ ನೀಡಿರುತ್ತಾರೆ. ಎರಡು ಧರ್ವಗಳ ಜನರ ನಡುವೆ ದ್ವೇಷ ಬೆಳೆಸುವ ಉದ್ದೇಶದಿಂ ಈರೀತಿ ಮಾತನಾಡಿದ್ದು ಇವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗು ಹಿರಿಯ ಆಟೋ ಚಾಲಕರು ಉಪಸ್ಥಿತರಿದ್ದರು.
