Home ಸ್ಥಳೀಯ ಸಮಾಚಾರ ಮಾಲಾಡಿಯಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ

ಮಾಲಾಡಿಯಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ

6
0

ಬೆಳ್ತಂಗಡಿ;  ಭಾರತರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ವತಿಯಿಂದ ದಿನಾಂಕ 27-4-2025 ನೇ ಭಾನುವಾರ ಮಾಲಾಡಿ ಅಂಬೇಡ್ಕರ್ ಭವನದ ವಠಾರದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.. ಮಾಲಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ  ಪುನೀತ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಯ ಕೋರಿ ಈ ಸಮಿತಿಯೊಂದಿಗೆ ಸದಾ ಸಹಕಾರ ನೀಡುತ್ತಾ ಜತೆಯಾಗಿ ಇರುವುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರರಾದ ಜನಾರ್ಧನ ಕೈಲಾರ, ಮಾಲಾಡಿ ಬೌದ್ಧ ಮಹಾಸಭಾದ ಅಧ್ಯಕ್ಷರಾದ ಸುನಿಲ್, ಮಹಿಳಾ ಸಮಿತಿಯ ಅಧ್ಯಕ್ಷರಾದ ಗುಲಾಬಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ‌ ಕ್ರಿಕೆಟ್, ತ್ರೋಬಾಲ್, ಹಗ್ಗಜಗ್ಗಾಟ ಹಾಗೂ ವಿವಿಧ ರೀತಿಯ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು.

ಸಂಜೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಯವರು ಮಾತಾಡಿ ವೈಚಾರಿಕ ಮಾತುಗಳನ್ನು ಕೇಳಲು ಜನ ಇಷ್ಟು ಹೊತ್ತಾದರೂ ಶಿಸ್ತು ಬದ್ದವಾಗಿ ಕುಳಿತಿರುವುದು ನಿಜಕ್ಕೂ ಆಶ್ಚರ್ಯವಾಗಿದೆ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಖುಷಿ ಇದೆ ಎಂದರು.‌ ಮತ್ತೋರ್ವ ಮುಖ್ಯ ಅತಿಥಿ ಎಸ್.ವಿ.ಎಸ್ ಪ್ರೌಢಶಾಲೆಯ ಶಿಕ್ಷಕಿ ಕು.‌ಪೂರ್ಣಿಮಾ ರವರು ಶುಭಹಾರೈಸಿದರು. ವೇದಿಕೆಯಲ್ಲಿ ಪಿ.ಡಬ್ಲ್ಯೂ ಗುತ್ತಿಗೆದಾರರಾದ ಕೇಶವ ಅಳಕೆ ಉಪಸ್ಥಿತರಿದ್ದರು. ‌ಅಧ್ಯಕ್ಷರಾದ ಸುರೇಶ್ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.‌ ಕು. ಸುನೀತಾ ನಿರೂಪಿಸಿ, ಕು. ಸುಶ್ಮೀತಾ ಇವರು ಸ್ವಾಗತಿಸಿ‌ ಕು. ಶಾಲಿನಿ‌ ವಂದಿಸಿದರು.

LEAVE A REPLY

Please enter your comment!
Please enter your name here