Home ಅಪರಾಧ ಲೋಕ ಮಂಗಳೂರು ಗುಂಪು ಹತ್ಯೆಗೆ ಬಲಿಯಾದ ಕೇರಳದ ಯುವಕ

ಮಂಗಳೂರು ಗುಂಪು ಹತ್ಯೆಗೆ ಬಲಿಯಾದ ಕೇರಳದ ಯುವಕ

22
0

ಬೆಳ್ತಂಗಡಿ; ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣದಲ್ಲಿ ಕೊಲೆಯಾದ ಯುವಕ ಕೇರಳದ ವಯನಾಡ್ ನಿವಾಸಿ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ವಯನಾಡ್ ಪುಲ್ಪಲ್ಲಿ ನಿವಾಸಿ ಅಶ್ರಫ್ (38) ಎಂಬಾತನಾಗಿದ್ದಾನೆ.
ಈತನ ಮನರಯವರು ಆಶ್ರಫ್ ನನ್ನು ಗುರುತಿಸಿರುವುದಾಗಿ ತಿಳಿದು ಬಂದಿದೆ. ಈತ ಕಳೆದ ಕೆಲ ಸಮಯದಿಂದ ಮನೆಯವರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎನ್ನಲಾಗಿದೆ. ಈತ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ಎಂದು ಮನರಯವರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಘಟನೆಗೆ ಸಂಭಂದಿಸಿದಂತೆ ಮಂಗಳೂರು ಪೊಲೀಸರು ಈವರೆಗೆ 20ಮಂದಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದೇ ಕೆಲೆಗೆ ಕಾರಣ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳಿರದ ಗುಂಪು ಹತ್ಯೆ ಪ್ರಕರಣ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಒಟ್ಟು ಘಟನೆಯ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂಬ ಒತ್ತಾಯ ಮುಸ್ಲಿಂ ಸಮುದಾಯದ ಮುಖಂಡರಿಂದ ಕೇಳಿ ಬರಯತ್ತಿದೆ.

LEAVE A REPLY

Please enter your comment!
Please enter your name here