


ಬೆಳ್ತಂಗಡಿ : ಸಹಕಾರಿ ಸಂಘದಲ್ಲಿ ಇಬ್ಬರು ಸಿಬ್ಬಂದಿಗಳು ಸಂಘದ ಅಕೌಂಟ್ ನಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಬಗ್ಗೆ ಮಾಹಿತಿ ಪಡೆದ ಬ್ಯಾಂಕ್ ಮ್ಯಾನೇಜ್ ಮೆಂಟ್ ಅವ್ಯವಹಾರಬ ಮಾಡಿದರಿಂದ ಈಗಾಗಲೇ 50% ಹಣವನ್ನು ವಾಪಸ್ ಸಂಘಕ್ಕೆ ಕಟ್ಟಿಸಿದ್ದಾರೆ. ಉಳಿದ ಹಣವನ್ನು ಕೂಡ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಆಂತರಿಕ ಪರಿಶೀಲನೆ ನಡೆಯುತ್ತಿದೆ ಎಂದು ಬ್ಯಾಂಕ್ ಆಡಳಿತಮಂಡಳಿ ಮಾಹಿತಿ ನೀಡಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಅಕೌಂಟ್ ನಿಂದ ಪ್ಲ್ಯಾನ್ ಮಾಡಿ ಸಿಬ್ಬಂದಿಗಳಿಬ್ಬರು ಸೇರಿ ಲಕ್ಷಂತರ ರೂಪಾಯಿ ಕನ್ನ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ವರ್ಷದ ಲೆಕ್ಕ ಪತ್ರ ಪರಿಶೋಧನೆ ವೇಳೆ ಸಂಘದ ಅಧ್ಯಕ್ಷ ಪದ್ಮ ಗೌಡರು ಹಾಗೂ ಆಡಳಿತ ಮಂಡಳಿಯವರು ಈ ಅವ್ಯವಹಾರ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಆಂತರಿಕ ತನಿಖೆ ನಡೆಸಿದಾಗ ಸಂಘದ ಸಿಬ್ಬಂದಿಗಳಾದ ಪ್ರಶಾಂತ್ ಗೌಡ ಮತ್ತು ಸದಾಶಿವ ಇಬ್ಬರು ಸೇರಿಕೊಂಡು ಅವ್ಯವಹಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಬಗ್ಗೆ ಸಂಘದ ಅಧ್ಯಕ್ಷ ಪದ್ಮಗೌಡ ಅವರು ಸ್ಪಷ್ಟನೆ ನೀಡಿದ್ದು 34 ಲಕ್ಷ ರೂಪಾಯಿ ಅವ್ಯವಹಾರ ಅಗಿರುವುದು ಮಾರ್ಚ್ ತಿಂಗಳ ಲೆಕ್ಕ ಪತ್ರ ಪರಿಶೋಧನೆ ವೇಳೆ ಗೊತ್ತಾಗಿದೆ. ಇದನ್ನು ಸಿಬ್ಬಂದಿಗಳಿಬ್ಬರು ಒಪ್ಪಿಕೊಂಡಿದ್ದು 50% ಹಣ ವಾಪಸ್ ನೀಡಿದ್ದಾರೆ ಉಳಿದ ಹಣವನ್ನು ಕೆಲವು ದಿನಗಳಲ್ಲಿ ವಾಪಸ್ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಅವ್ಯವಹಾರವಾಗಿರುವ ಒಟ್ಟು ಮೊತ್ತದೆ ಬಗ್ಗೆ ಹಲವಾರು ಗೊಂದಲಗಳು ಇರುವುದಾಗಿಯೂ ತಿಳಿದು ಬರುತ್ತಿದೆ. ಅವ್ಯವಹಾರದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಂಪೂರ್ಣವಾದ ಲೆಕ್ಕಪತ್ರಗಳ ಪರಿಶೀಲನೆಯ ಬಳಿಕವಷ್ಟೇ ಸ್ಪಷ್ಟಗೊಳ್ಳಬೇಕಾಗಿದೆ.
