
ಬೆಳ್ತಂಗಡಿ; ಇಲ್ಲಿನ ಸೈಂಟ್ ಲಾರೆನ್ಸ್ ಪ್ರಧಾನ ದೆವಾಲಯದಲ್ಲಿ
ಪವಿತ್ರ ಗುರುವಾರ(ಪಾಸ್ಖ ಗುರುವಾರ)ವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ ಗಳಲ್ಲಿ ಬೆಳಿಗ್ಗೆ ಬಲಿಪೂಜೆಯೊ0ದಿಗೆ ಪವಿತ್ರ ಗುರುವಾರ (ಪಾಸ್ಖ ಗುರುವಾರ) ವಿಧಿವಿದಾನಗೆಳು ನಡೆಯಿತು.
ಬೆಳ್ತಂಗಡಿ ಸಂತ ಲಾರೆನ್ಸ್ ಅವರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ ಬಿಷಪ್ಪ್ ಲಾರೆನ್ಸ್ ಮುಕ್ಕುಯಿಯವರು (ಪಾಸ್ಖ ಗುರುವಾರ) ವಿಧಿವಿದಾನಗೆಳನ್ನು ನೆರವೆರಿಸಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು. ಯೇಸು ಸ್ವಾಮಿಯು 12 ಮಂದಿ ಶಿಷ್ಯರ ಪಾದಗಳನ್ನು ತೊಳೆದ ಕಾರ್ಯದ ಸಂಕೇತವಾಗಿ ಧರ್ಮಾಧ್ಯಕ್ಷರು 12 ಜನರ ಪಾದಗಳನ್ನು ತೊಳೆಯುವ ಕಾರ್ಯ ಮಾಡಿದರು. ವಿವಿಧ ಧರ್ಮಿಕ ವಿಧಿ ವಿದಾನಗೆಳನ್ನು ನೆರವೆರಿಸಿದರು.
ಈ ಸಂದರ್ಭದಲ್ಲಿ ವಂ ಫಾ. ಕುರಿಯಾಕೋಸ್ ವೆಟ್ಟುವಯಿ ಪ್ರವಚನ ನೀಡಿದರು. ಫಾ. ತೋಮಸ್ ಕಣ್ಣಾಂಙಳ್, ಫಾ. ಲಾರೆನ್ಸ್ ಪುಣೋಳಿಲ್, ಫಾ. ಜೋಸೆಪ್ಪ್ ಮಟ್ಟಂ, ಫಾ. ಅಬ್ರಹಾಂ ಪಟ್ಟೇರಿಲ್,
ಫಾ. ಜೋಬಿ ಪುಲ್ಲಾಟ್ಟ್, ಫಾ. ಜೋಸೆಪ್ಪ್ ಒ.ಸಿ.ಡಿ., ಫಾ. ಜಾರ್ಜ್ ಒ.ಸಿ.ಡಿ., ಫಾ. ಜೋಸೆಪ್ಪ್ ಪುತ್ತೇಟ್ಟುಪಡವಿಲ್ ಉಪಸ್ಧಿತರಿದ್ದರು.