Home ರಾಷ್ಟ್ರ/ರಾಜ್ಯ ಯೂಟ್ಯೂಬರ್ ಸಮೀರ್ ವಿರುದ್ದ ಹತ್ತು ಕೋಟಿ ರೂ ಮಾನನಷ್ಟ ಮೂಕದ್ದಮೆದಾಖಲಿಸಿದ ಡಿ.ಹರ್ಷೇಂದ್ರ ಕುಮಾರ್

ಯೂಟ್ಯೂಬರ್ ಸಮೀರ್ ವಿರುದ್ದ ಹತ್ತು ಕೋಟಿ ರೂ ಮಾನನಷ್ಟ ಮೂಕದ್ದಮೆದಾಖಲಿಸಿದ ಡಿ.ಹರ್ಷೇಂದ್ರ ಕುಮಾರ್

0

ಬೆಳ್ತಂಗಡಿ; ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂ.ಡಿ. ದೂತ ” ಎಂಬ ಯೂಟ್ಯೂಬರ್ ಹಾಕಿದ್ದ ವೀಡಿಯೋದ‌ ವಿರುದ್ದ ಇದೀಗ ಡಿ. ಹರ್ಷೇಂದ್ರಕುಮಾರ್ ಹಾಗೂ ನಿಶ್ಚಲ್ ಕುಮಾರ್ ಬೆಂಗಳೂರಿನ‌ ನ್ಯಾಯಾಲಯದಲ್ಲಿ ಹತ್ತು ಕೋಟಿ ಮಾನನಷ್ಟ ಮೂಕದ್ದಮೆ ಹೂಡಿದ್ದಾರೆ.
ಆರಂಭದಲ್ಲಿ ಸಮೀರ್ ಹಾಕಿದ್ದ ವಿಡಿಯೋದ ವಿರುದ್ಧ ನ್ಯಾಯಾಲಯವು ವಿಡಿಯೋ ತೆಗೆದುಹಾಕುವಂತೆ ಮತ್ತು ಈ ಕುರಿತು ವಿಡಿಯೋ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಘನ ನ್ಯಾಯಾಲಯದ ತಡೆಯಾಜ್ಞೆ ನೀಡಿತ್ತು ಈ ಅದೇಶವನ್ನು ಉಲ್ಲಂಘಿಸಿ, ಎರಡನೇ ವಿಡಿಯೋವನ್ನು ಬಿಡಲಾಗಿತ್ತು ” ಸಮೀರ್ ಎಂ.ಡಿ. ದೂತ ” ಎಂಬ ವ್ಯಕ್ತಿ ಹಾಗೂ ಯೂಟ್ಯೂಬ್ ಚಾನಲ್ ದೂತದ ಮೇಲೆ ಮಾನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಯೂಟ್ಯೂಬರ್ ಗೆ ನೋಟೀಸ್ ಜಾರಿ ಮಾಡಿ, ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಹಾಗೂ ಮುಖ್ಯವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೋ ತಕ್ಷಣ ಡಿಲೀಟ್ ಮಾಡಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಆದೇಶಮಾಡಿದೆ. ಧರ್ಮಸ್ಥಳ ಪರ ರಾಜಶೇಖರ ಹಿಲ್ಯಾರ್ ಮಂಡಿಸಿದ ವಾದವನ್ನು ಆಲಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಈ ಆದೇಶಮಾಡಿದ್ದಾರೆ.

ಸಮೀರ್ ದೂತ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಹಾಕಲಾಗಿದ್ದ ಈ ವೀಡಿಯೋ ರಾಜ್ಯದಾದ್ಯಂತ ವೈರಲ್ ಆಗಿತ್ತು. ಲಕ್ಷಾಂತರ ಜನರು ಇದನ್ನು ನೋಡಿದ್ದರು. ಹಾಗೂ ಹಲವು ವಿವಾದಗಳಿಗೂ ಕಾರಣವಾಗಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version