

ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೂ ವ್ಯಾಪ್ತಿಗೆ ಒಳಪಡುವ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನೇಮಕ ಮಾಡಿದ್ದಾರೆ. ಪರಿಶಿಷ್ಟ ಜಾತಿ ವರ್ಗದಿಂದ ಗಣೇಶ್ ಬಿನ್ ರುಕ್ಮಯ್ಯ ಪೇರ್ದಡ್ಕ ಕಣಿಯೂರು, ಮಹಿಳೆ ಶ್ರೀಮತಿ ಗೀತಾ ಕೋಂ ಪ್ರವೀಣ್ ಪೂಜಾರಿ ಬಂದಾರು, ಸಾಮಾನ್ಯ ವರ್ಗದಿಂದ ಮಹಮ್ಮದ್ ಬಿನ್ ಸುಲೈಮಾನ್ ಕರಾಯ, ನೇಮಕವಾಗಿದ್ದಾರೆ
