Home ಸ್ಥಳೀಯ ಸಮಾಚಾರ ಕಲ್ಮಂಜ; ಕಾಡಾನೆ ದಾಳಿ ವ್ಯಾಪಕವಾದ ಕೃಷಿ ಹಾನಿ

ಕಲ್ಮಂಜ; ಕಾಡಾನೆ ದಾಳಿ ವ್ಯಾಪಕವಾದ ಕೃಷಿ ಹಾನಿ

0

ಬೆಳ್ತಂಗಡಿ; ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಯುಂಟುಮಾಡಿದ‌ ಘಟನೆ ಸಂಭವಿಸಿದೆ.
ಇಲ್ಲಿನ ನಿವಾಸಿಗಳಾದ ಎಂ.ಎಸ್.ಪ್ರಕಾಶ್ಮತ್ತು ಶ್ರೀನಿವಾಸ ನಾಯ್ಕ ಎಂಬವರಿಗೆ ಸೇರಿದ ತೋಟಗಳಿಗೆ ಕಾಡಾನೆಗಳು ನುಗ್ಗಿದೆ. ತೋಟದಲ್ಲಿ ಸುಮಾರು ನೂರಕ್ಕಿಂತ ಅಧಿಕ ಬಾಳೆ ಗಿಡ, 15 ಕ್ಕೂ ಅಧಿಕ ಅಡಿಕೆ ಗಿಡ, ಮತ್ತು ತೆಂಗಿನ ಮರಗಳನ್ನು ನಾಶಪಡಿಸಿದೆ. ಕಾಡಾನೆಗಳ
ಗುಂಪಿನಲ್ಲಿ ಮರಿಯಾನೆ ಸಹಿತ ಮೂರು ಕಾಡಾನೆಗಳು ಇರಬಹುದೆಂದು ಶಂಕಿಸಲಾಗಿದೆ.ಘಟನೆಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version