


ಪದ್ಮಲತಾಳ ಹತ್ಯೆಯಾಗಿ 39 ವರ್ಷಗಳಾಗಿದೆ ಈಗಲೂ ತನಿಖೆ ನಡೆದರೆ ಸತ್ಯ ಹೊರ ಬಂದು ಆರೋಪಿಗಳಿಗೆ ಶಿಕ್ಷೆಯಾಗುವ ವಿಶ್ವಾಸವಿದೆ ಎಂದು ಕೊಲೆಯಾದ ಪದ್ಮಲತಾಳ ಅಕ್ಕ ಇಂದ್ರಾವತಿ ಹೇಳಿದ್ದಾರೆ.
ಪದ್ಮಲತಾ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಎಸ್.ಐ.ಟಿ. ಗೆ ದೂರು ನೀಡಲು ಆಗಮಿಸಿದ ವೇಳೆ ಅವರು ಮಾದ್ಯಮದವರೊಂದಿಗೆ ಮಾತನಾಡಿದರು.
ಪದ್ಮಲತಾ ಪ್ರಕರಣದಲ್ಲಿ ಈ ಹಿಂದೆ ಹಲವು ಹಂತದ ತನಿಖೆಗಳು ನಡೆದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಸಿಒಡಿ ತನಿಖೆ ನಡೆಸಿ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿದ್ದಾರೆ.
ಇದೀಗ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಎಸ್.ಐ.ಟಿ ತಂಡವನ್ನು ರಚಿಸಿದೆ. ಈ ಎಸ್.ಐ.ಟಿ ತಂಡ ತನಿಖೆ ನಡೆಸಿದರೆ ಪದ್ಮಲತಾ ಪ್ರಕರಣದ ಆರೋಪಿಗಳನ್ನು ಕಾನೂನಿನ ಮುಂದೆ ತರಬಹುದು ಎಂಬ ವಿಶ್ವಾಸವಿದೆ. ಎಸ್.ಐ.ಟಿ ತಂಡ ಪ್ರಕರಣದ ತನಿಖೆ ನಡೆಸಿದರೆ ನಮ್ಮ ಬಳಿ ಇರುವ ಸಾಕ್ಷ್ಯಗಳು ಹಾಗೂ ಮಾಹಿತಿಗಳನ್ನು ತನಿಖಾ ತಂಡಕ್ಕೆ ನೀಡಲು ಸಿದ್ದರಿದ್ದೇವೆ.
ಇದೀಗ ಪದ್ಮಲತಾಳ ಹತ್ಯೆಯಾಗಿ 39 ವರ್ಷಗಳಾಗಿದೆ. ತನಿಖೆ ಮಾಡಿದರೆ ಈಗಲೂ ಸತ್ಯ ಹೊರಬರುವ ನಿರೀಕ್ಷೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರುಗಳಾದ ಬಿ.ಎಂ ಭಟ್, ಲಕ್ಷ್ಮಣ ಗೌಡ ಪಾಂಗಳ ಇದ್ದರು.
