ಬೆಳ್ತಂಗಡಿ; ತಾಲೂಕು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ, ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡ ಪಿ ವೆಂಕಟ್ರಮಣ ಭಟ್ (ಕೊಂಚ ಭಟ್) (88) ಅವರು ಅಲ್ಪ ಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಮಾ.26 ರಂದು ನಿಧನರಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ಅವರು ಹವ್ಯಕ ಸಂಘಟನೆಯಲ್ಲಿಯೂ ತೆಡಗಿಸಿಕೊಂಡಿದ್ದರು. ಮೃತರು ಲಕ್ಷ್ಮಿ ಅಮ್ಮ ಐವರು ಹೆಣ್ಣು ಮಕ್ಕಳನ್ನು ಚಲನಚಿತ್ರ ನಿರ್ದೇಶಕ ಜಿ.ಕೃಷ್ಣ, ಹಾಗೂ ಶಂಕರ ವಿಠಲ್ ಅವರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.




