Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಕೊಲೆಯಾದ ಸುಮಂತ್ ಮನೆಗೆ ಪ್ರತಿಭಾ ಕುಳಾಯಿ ಭೇಟಿ

ಬೆಳ್ತಂಗಡಿ : ಕೊಲೆಯಾದ ಸುಮಂತ್ ಮನೆಗೆ ಪ್ರತಿಭಾ ಕುಳಾಯಿ ಭೇಟಿ

1
0

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಬಾಲಕ ಸುಮಂತ್(16) ಎಂಬಾತ ಜ.14 ರಂದು ಬೆಳಗ್ಗೆ ನಾಳ ದೇವಸ್ಥಾನಕ್ಕೆ ನಡೆದುಕೊಂಡು ಹೋಗುವಾಗ ನಿಗೂಢವಾಗಿ ಕೊಲೆಯಾದವನ ಮನೆಗೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮಾ.11 ರಂದು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ತಿಳಿಸಿ ತನಿಖೆ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು.

ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮೀತಾ ಪೂಜಾರಿ, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುನಿತ್, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಯ ಸದಸ್ಯರಾದ ಮರಿಟ ಪಿಂಟೋ ಮತ್ತು ಸೌಮ್ಯ ಲಾಯಿಲ, ಕರೀಂ ಗೇರುಕಟ್ಟೆ , ಯಕ್ಷಗಾನ ಸಾಹಿತ್ಯ ಅಕಾಡೆಮಿ ಸದಸ್ಯ ರಾಘವ ಹೆಚ್.ಗೇರುಕಟ್ಟೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ವೇತಾ, ಉದ್ಯಮಿಗಳಾದ ರಶೀದ್ ಪಾರಿಮಾ, ರಫೀಕ್ ಮುಸ್ಲೀಯಾರ್ ಜಾರಿಗೆಬೈಲು, ಸಮದ್ ಗೇರುಕಟ್ಟೆ , ಲಕ್ಷ್ಮಣ ನಾಯ್ಕ್ ಗೇರುಕಟ್ಟೆ, ಕೇಶವತಿ, ಉಷಾ ಶರತ್ ಬಾರ್ಯ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here