


ಬೆಳ್ತಂಗಡಿ :ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿತೆ ಸಾಕ್ಷಿ ದೂರುದಾರ ಚಿನ್ನಯ್ಯ ಬುರುಡೆ ಬಗ್ಗೆ ಸಾಕ್ಷಿ ಹೇಳಿಸಲು ಎಸ್.ಐ.ಟಿ ಅಧಿಕಾರಿಗಳು ಬಂಟ್ವಾಳದ ಪ್ರದೀಪ್ ಎಂಬಾತನನ್ನು ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಧೀಶರಾದ ಸಂದೇಶ್ ಮುಂದೆ ಸೆ.12 ರಂದು 3 ಗಂಟೆಗೆ ಬುರುಡೆ ಪ್ರಕರಣದಲ್ಲಿ ಸೌಜನ್ಯ ಮಾವ ವಿಠಲ್ ಗೌಡನ ಜೊತೆ ಸಹಾಯಕನಾಗಿ ಇದ್ದ ಎನ್ನಲಾಗಿದ್ದ ಬಂಟ್ವಾಳ ನಿವಾಸಿ ಪ್ರದೀಪ್ ಎಂಬಾತನನ್ನು ಸಾಕ್ಷಿ ಹೇಳಿಸಲು ಎಸ್.ಐ
ಟಿ ಅಧಿಕಾರಿಗಳು ಹಾಜರುಪಡಿಸಿದ್ದು. ನ್ಯಾಯಾಲಧೀಶರ ಮುಂದೆ ಮುಚ್ಚಿದ ಕೋಣೆಯಲ್ಲಿ ಈತ ಹೇಳಿಕೆ ನೀಡುತ್ತಿದ್ದಾನೆ ಈತನ ಹೇಳಿಕೆಗಳನ್ನು ದಾಖಲಿಸಿದ ಬಳಿಕ ಎಸ್.ಐ.ಟಿ ಈ ತನಿಖೆಯಲ್ಲಿ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ
