ಬೆಳ್ತಂಗಡಿ; ಮೃತದೆಹಗಳಿಗಾಗಿ ಹುಡುಕಾಟ ನಡೆಯುವ ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿ ಸೋಮವಾರ ಹೊಸ ಬೆಳವಣಿಗೆಗಳು ನಡೆದಿದ್ದು 11ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗ ಸಂದರ್ಭದಲ್ಲಿ ಅನಾಮಿಕ ವ್ಯಕ್ತಿ ಕಾರ್ಯಾಚರಣೆ ನಾಡೆಸುತ್ತಿರು ತಂಡವನ್ನು ಗುರುತಿಸಿದ ಸ್ಥಾನದಿಂದ ಮೇಲ್ಭಾಗಕ್ಕೆ ಕರೆದೊಯ್ದಿದ್ದಾನೆ ಇದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.
ಆತ ಗುರುತಿಸಿದ 11ನೆಯ ಸ್ಥಳದಲ್ಲಿ ಇನ್ನೂ ಅಗೆಯುವ ಕಾರ್ಯ ಆರಂಭವಾಗಿಲ್ಲ
ಈ ಪ್ರದೇಶಲ್ಲಿ ದಟ್ಟವಾದ ಕಾಡಿದ್ದು ಈ ಕಾಡಿನ ಪ್ರದೇಶದಲ್ಲಿ ಆತ ಹೊಸ ಸ್ಥಳಗಳನ್ನು ಗುರುತಿದ್ದಾನೆಯೇ ಎಂಬ ಅನುಮಾನವಿದೆ. ಈ ಅರಣ್ಯದಲ್ಲಿ ಏನಿದೆ ಎಂಬುದು ಕುತೂಹಲದ ವಿಚಾರವಾಗಿದೆ.
ಈತ ಹೊಸ ಸ್ಥಳಗಳನ್ನು ಗುರುತಿಸಿದ್ದಾನೆಯೇ ಅಥವಾ ಬೇರೇನಾದರೂ ವಿಚಾರವಿದೆಯೇ ಕಾದು ನೋಡಬೇಕಾಗಿದೆ.ಈಗ ಯಾವ ಸ್ಥಳವನ್ನು ಅಗೆಯ ಬೇಕು ಎಂಬ ಬಗ್ಗೆ ಅಧಿಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಹತ್ತು ಸ್ಥಳವನ್ನು ಅಗೆದರೂ ಕೇವಲ ಒಂದು ಸ್ಥಳದಲ್ಲಿ ಮಾತ್ರ ಅಸ್ತಿಜರ ಸಿಕ್ಕಿತ್ತು ಈ ಹಿನ್ನಲೆಯಲ್ಲಿ ಆತ ಹೆಚ್ಚಿನ ಸ್ಥಳಗಳನ್ನು ಗುರುತಿಸುತ್ತಿದ್ದಾನೆಯೇ ಎಂಬ ಅನುಮಾವಿದೆ.
