Home ಸ್ಥಳೀಯ ಸಮಾಚಾರ ನೆರಿಯ: ಸಾಕು ನಾಯಿ ಮೇಲೆ ಚಿರತೆ ದಾಳಿ

ನೆರಿಯ: ಸಾಕು ನಾಯಿ ಮೇಲೆ ಚಿರತೆ ದಾಳಿ

0
20


ಬೆಳ್ತಂಗಡಿ:ಮನೆಯಂಗಳ ಪ್ರವೇಶಿಸಿದ ಚಿರತೆ ಸಾಕುನಾಯಿಯ ಮೇಲೆ ದಾಳಿ ಮಾಡಿದ ಘಟನೆ ನೆರಿಯದಲ್ಲಿ ನಡೆದಿದೆ.
ಇಲ್ಲಿನ ಅಂಕೊತ್ಯಾರ್ ಎಂಬಲ್ಲಿ ಸಿಜು ಎಂಬವರ ಮನೆಯಂಗಳಕ್ಕೆ ಜೂ. 24ರ ಮುಂಜಾನೆ 3.30ರ ಸುಮಾರಿಗೆ ಚಿರತೆ ಆಗಮಿಸಿದ್ದು ನಾಯಿ ಮೇಲೆ ದಾಳಿ ಮಾಡಿದಾಗ ಅದು ಬೊಬ್ಬೆ ಹೊಡೆಯುವ ಶಬ್ದಕ್ಕೆ ಮನೆಯವರು ಎಚ್ಚೆತ್ತು ಹೊರಗೆ ಬರುತ್ತಿದ್ದಂತೆ ನಾಯಿಯನ್ನು ಗಾಯಗೊಳಿಸಿ ಚಿರತೆ ಸಮೀಪದ ಅರಣ್ಯದತ್ತ ಹೋಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ನೆರಿಯ ಶಾಖೆಯ ಡಿಆರ್‌ ಎಫ್ ಒ ರವಿಚಂದ್ರ,ಚಿಬಿದ್ರೆ ಶಾಖೆಯ ಡಿಆರ್ ಎಫ್ ಒ ನಾಗೇಶ್ ಹಾಗೂ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ಬೋನು ಅಳವಡಿಸುವ ಕುರಿತು ಚಿಂತನೆ ನಡೆದಿದೆ.

NO COMMENTS

LEAVE A REPLY

Please enter your comment!
Please enter your name here